ಕರ್ನಾಟಕ

karnataka

By

Published : Jul 29, 2021, 7:52 PM IST

ETV Bharat / sports

ಭಾರತ-ಶ್ರೀಲಂಕಾ ನಿರ್ಣಾಯಕ ಟಿ20: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಧವನ್​ ಪಡೆ

ಟಿ20 ಸರಣಿ ಕೈವಶ ಮಾಡಿಕೊಳ್ಳುವ ತವಕದೊಂದಿಗೆ ಭಾರತ-ಶ್ರೀಲಂಕಾ ಫೈನಲ್​ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದು, ಇಂದು ಗೆಲ್ಲುವ ತಂಡ ಟ್ರೋಫಿಗೆ ಮುತ್ತಿಕ್ಕಲಿದೆ.

Sri Lanka vs India
Sri Lanka vs India

ಕೊಲಂಬೊ:ಫೈನಲ್​ ಟಿ-20 ಪಂದ್ಯದಲ್ಲಿ ಟಾಸ್​ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್​ ಆಯ್ದುಕೊಂಡಿದೆ. ಸರಣಿಯಲ್ಲಿ ಉಭಯ ತಂಡಗಳು ಈಗಾಗಲೇ 1-1 ಅಂತರದಿಂದ ಸಮಬಲ ಸಾಧಿಸಿವೆ.

ಮೊದಲ ಏಕದಿನ ಪಂದ್ಯದಲ್ಲಿ 38ರನ್​ಗಳ ಅಂತರದೊಂದಿಗೆ ಗೆದ್ದಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ 4 ವಿಕೆಟ್​​ಗಳ ವಿರೋಚಿತ ಸೋಲು ಅನುಭವಿಸಿದೆ. ಆದರೆ ಇಂದಿನ ಪಂದ್ಯದಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಕೊರೊನಾ ಕಾರಣ ಟೀಂ ಇಂಡಿಯಾ ಪ್ರಮುಖ ಆಟಗಾರರು ಸರಣಿಯಿಂದ ಹೊರಗುಳಿದಿದ್ದು, ಹೀಗಾಗಿ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.

ಆಡುವ 11ರ ಬಳಗ

ಟೀಂ ಇಂಡಿಯಾ: ಶಿಖರ್​ ಧವನ್(ಕ್ಯಾಪ್ಟನ್​), ಋತುರಾಜ್ ಗಾಯ್ಕವಾಡ, ದೇವದತ್ ಪಡಿಕ್ಕಲ್​, ಸಂಜು ಸ್ಯಾಮ್ಸನ್​(ವಿ,ಕೀ), ನಿತೀಶ್​ ರಾಣಾ, ಭುವನೇಶ್ವರ್ ಕುಮಾರ್​, ಕುಲ್ದೀಪ್ ಯಾದವ್, ರಾಹುಲ್​ ಚಹರ್, ಸಂದೀಪ್​ ವಾರಿಯರ್​, ಚೇತನ್​ ಸಕಾರಿಯಾ ಹಾಗೂ ವರುಣ್​ ಚಕ್ರವರ್ತಿ.

ನಿನ್ನೆ ಮೈದಾನದಲ್ಲಿ ಕ್ಷೇತ್ರ ರಕ್ಷಣೆ ಮಾಡ್ತಿದ್ದ ಸಂದರ್ಭದಲ್ಲಿ ನವದೀಪ್ ಸೈನಿ ಗಾಯಗೊಂಡಿರುವ ಕಾರಣ ಅವರ ಸ್ಥಾನಕ್ಕೆ ಸಂದೀಪ್​ ವಾರಿಯರ್​ ಅವಕಾಶ ಪಡೆದುಕೊಂಡಿದ್ದಾರೆ.

ಶ್ರೀಲಂಕಾ: ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿ,ಕೀ​), ಸದೀರಾ ಸಮರವಿಕ್ರಮ, ಪಾತುಮ್ ನಿಸ್ಸಂಕಾ, ದಾಸುನ್ ಶಾನಕ (ಕ್ಯಾ), ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನ, ಅಕಿಲಾ ಧನಂಜಯ, ದುಷ್ಮಂತ ಚಮೀರಾ

ABOUT THE AUTHOR

...view details