ಕರ್ನಾಟಕ

karnataka

By

Published : Sep 19, 2022, 7:52 AM IST

ETV Bharat / sports

ಗೊಂದಲಕ್ಕೆ ತೆರೆ: ಈ ಪ್ಲೇಯರ್​​ ನನ್ನೊಂದಿಗೆ ಇನ್ನಿಂಗ್ಸ್ ಆರಂಭಿಸ್ತಾರೆಂದ ರೋಹಿತ್

ಟಿ20 ವಿಶ್ವಕಪ್​​ನಲ್ಲಿ ವಿರಾಟ್​​ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆಂಬ ಗೊಂದಲಕ್ಕೆ ರೋಹಿತ್ ಶರ್ಮಾ ತೆರೆ ಎಳೆದಿದ್ದಾರೆ.

Rohit Sharma Answers on Kohli batting order
Rohit Sharma Answers on Kohli batting order

ಮೊಹಾಲಿ(ಪಂಜಾಬ್​​):ಏಷ್ಯಾ ಕಪ್​​ನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್​​ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಹೀಗಾಗಿ, ಮುಂಬರುವ ವಿಶ್ವಕಪ್​​ನಲ್ಲಿ ಅವರು ಕ್ಯಾಪ್ಟನ್ ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆಂಬ ಮಾತು ಕೇಳಿ ಬರಲು ಶುರುವಾಗಿದ್ದವು. ಇದಕ್ಕೆ ಖುದ್ದಾಗಿ ಕ್ಯಾಪ್ಟನ್​ ರೋಹಿತ್ ಶರ್ಮಾ ತೆರೆ ಎಳೆದಿದ್ದಾರೆ.

ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ ತಂಡದ ನಾಯಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿ, ವಿರಾಟ್​​ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ ಎಂದು ಹೇಳಿದ್ದಾರೆ.

ವಿರಾಟ್​ ಬ್ಯಾಟಿಂಗ್ ಆರ್ಡರ್​​ ಗೊಂದಲಕ್ಕೆ ತೆರೆ ಎಳೆದ ಕ್ಯಾಪ್ಟನ್​​ ರೋಹಿತ್​

ವಿಶ್ವಕಪ್​​​ ಆರಂಭಕ್ಕೂ ಮುಂಚಿತವಾಗಿ ಕೆಲವೊಂದು ಪ್ರಯೋಗ ಮಾಡಲಾಗಿದ್ದು, ಅದರಲ್ಲಿ ನಾವು ಯಶಸ್ಸು ಕಂಡಿದ್ದೇವೆ. ವಿರಾಟ್​​ ಕೊಹ್ಲಿ ಅವರನ್ನು ಓಪನರ್​ ಆಗಿ ಕಣಕ್ಕಿಳಿಸುವುದು ಒಂದು ಆಯ್ಕೆ. ಆದರೆ, ಟಿ20 ವಿಶ್ವ ಕಪ್​ನಲ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ. ಐಪಿಎಲ್​​ನಲ್ಲಿ ತಮ್ಮ ಫ್ರಾಂಚೈಸಿಗೋಸ್ಕರ ಅವರು ಓಪನರ್​​ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ವಿಶ್ವಕಪ್​​ನಲ್ಲಿ ಅದು ಒಂದು ಆಯ್ಕೆ ಮಾತ್ರ ಎಂದರು.

ಇದನ್ನೂ ಓದಿ:'ಇಂಥ ನಾನ್ಸೆನ್ಸ್‌ ಶುರು ಮಾಡ್ಬೇಡಿ..' ಕೊಹ್ಲಿ ಬ್ಯಾಟಿಂಗ್‌ ಆರ್ಡರ್‌ ಬದಲಿಸುವ ವಿಚಾರಕ್ಕೆ ಗಂಭೀರ್ ಗರಂ

ವಿಶ್ವಕಪ್​​ನಂತಹ ದೊಡ್ಡ ಟೂರ್ನಮೆಂಟ್​​ನಲ್ಲಿ ನಾವು ಆಡುವಾಗ ಆಯ್ಕೆಗಳು ಬೇಕಾಗುತ್ತವೆ. ಇದೀಗ ವಿರಾಟ್​​ ಕೊಹ್ಲಿ ಒಂದು ಆಯ್ಕೆಯಾಗಿರುವುದು ನಮಗೆ ಸಂತೋಷ. ಆದರೆ, ಕೆಲವೊಂದು ಪ್ರಯೋಗ ಮಾಡಿದಾಗ ಅದು ಶಾಶ್ವತವಾಗಿರಲ್ಲ. ಆಟಗಾರರ ಗುಣಮಟ್ಟ ಹಾಗೂ ಸಾಮರ್ಥ್ಯ ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದರು. ರಾಹುಲ್​ ಬ್ಯಾಟಿಂಗ್​​ನಿಂದ ರನ್​ ಹರಿದು ಬರ್ತಿಲ್ಲ. ಆದರೆ, ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂದರು.

ಕಳೆದ ಎರಡ್ಮೂರು ವರ್ಷಗಳಿಂದ ಅವರ ದಾಖಲೆ ನೋಡಿದ್ರೆ ಖಂಡಿತವಾಗಿ ರಾಹುಲ್​ ಎಂತಹ ಆಟಗಾರ ಎಂಬುದು ನಿಮಗೆ ಗೊತ್ತಾಗುತ್ತದೆ. ಒಂದು ಪಂದ್ಯದಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದ್ದಾರೆಂಬ ಕಾರಣಕ್ಕಾಗಿ ಬದಲಾವಣೆ ಮಾಡುವ ಅಗತ್ಯವಿಲ್ಲ. ಇದರಲ್ಲಿ ನಮಗೆ ಯಾವುದೇ ಗೊಂದಲ್ಲವಿಲ್ಲ. ಕೆಎಲ್​ ಒಪನರ್​ ಆಗಿ ಕಣಕ್ಕಿಳಿಯಲಿದ್ದಾರೆ ಎಂದರು.

ಜಸ್ಪ್ರೀತ್​ ಬುಮ್ರಾ, ಹರ್ಷಲ್ ತಂಡಕ್ಕೆ ಮರಳಿರುವುದು ತಂಡಕ್ಕೆ ಶಕ್ತಿ ನೀಡಿದೆ. ಜಡೇಜಾ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್​ ತಂಡಕ್ಕೆ ಸೇರಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು. ಜಡೇಜಾ ಸ್ಥಾನ ತುಂಬಬಲ್ಲ ಸಾಮರ್ಥ್ಯ ಅಕ್ಷರ್ ಬಳಿ ಇದೆ. ಇತ್ತೀಚೆಗೆ ವೆಸ್ಟ್ ಇಂಡೀಸ್​ ವಿರುದ್ಧದ ಸರಣಿಯಲ್ಲಿ ಅದನ್ನು ಸಾಬೀತುಪಡಿಸಿದ್ದಾರೆ ಎಂದರು.

ಸಿರಾಜ್​ ಬದಲಿಗೆ ಉಮೇಶ್​ಗೆ ಮಣೆ:ಮೊಹಮ್ಮದ್ ಶಮಿ ಕೋವಿಡ್​​ಗೆ ಒಳಗಾಗಿರುವ ಕಾರಣ ಅನುಭವಿ ಉಮೇಶ್ ಯಾದವ್​​ಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ರೋಹಿತ್​, ಸಿರಾಜ್​ ಈಗಾಗಲೇ ಕೌಂಟಿ ಕ್ರಿಕೆಟ್​ನಲ್ಲಿ ಆಡ್ತಿದ್ದು, ಅವರ ಮೇಲೆ ಮತ್ತಷ್ಟು ಒತ್ತಡ ಹಾಕಲು ಸಾಧ್ಯವಿಲ್ಲ. ಪ್ರಸಿದ್ಧ್ ಕೃಷ್ಣ ಗಾಯಗೊಂಡಿದ್ದಾರೆ. ಇನ್ನೂ ಆವೇಶ್ ಖಾನ್​ ಅವರಿಗೆ ವಿಶ್ರಾಂತಿ ಅವಶ್ಯಕತೆ ಇದ್ದು, ಹೀಗಾಗಿ, ಉಮೇಶ್ ಯಾದವ್​ಗೆ ಮಣೆ ಹಾಕಲಾಗಿದೆ ಎಂದರು. ಐಪಿಎಲ್​​ನಲ್ಲಿ ಅವರ ಪ್ರದರ್ಶನದ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು.

ABOUT THE AUTHOR

...view details