ನೇಪಿಯರ್(ನ್ಯೂಜಿಲ್ಯಾಂಡ್ ): ಮೌಂಟ್ ಮೌಂಗನುಯಿಯಲ್ಲಿರುವ ಬೇ ಓವಲ್ನಲ್ಲಿ ನಡೆದ ಎರಡನೇ ಟಿ20ಐನಲ್ಲಿ ಭಾರತ 65 ರನ್ಗಳ ಜಯ ಸಾಧಿಸಿದ ನಂತರ ಮೂರನೇ ಪಂದ್ಯಕ್ಕೆ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಮೂರನೇ ಪಂದ್ಯ ಗೆದ್ದು ಸರಣಿ ವಶ ಪಡಿಸಿಕೊಳ್ಳುವ ತವಕದಲ್ಲಿ ಬ್ಲೂ ಕ್ಯಾಪ್ಸ್ ಇದ್ದರೆ, ಸರಣಿ ಸಮಬಲ ಮಾಡಿಕೊಳ್ಳಲು ಕಿವೀಸ್ ಹವಣಿಸುತ್ತಿದೆ.
ಟಿ 20ಯಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಸೂರ್ಯ ಭಾರತಕ್ಕೆ ಆಸರೆ. ಆದರೆ ವಿಶ್ವಕಪ್ಗೂ ಮೊದಲಿನಿಂದ ಭಾರತ ಉತ್ತಮ ಆರಂಭ ಗಳಿಸದಿರುವುದು ಭಾರತದ ಋಣಾತ್ಮಕ ಅಂಶವಾಗಿದೆ. ಬೌಲಿಂಗ್ ವಿಭಾಗದಲ್ಲಿ ಹೂಡಾ ಹೊಸಾ ಭರವಸೆ ಮೂಡಿಸಿದ್ದು, ಚಹಾಲ್ ಮತ್ತು ಸುಂದರ್ಗೆ ಸಾಥ್ ನೀಡುತ್ತಿದ್ದಾರೆ. ನಾಯಕ ಹಾರ್ದಿಕ್ ಕೂಡ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿ ಮೆರೆಯ ಬೇಕಿದೆ. ಪಂತ್ ಆರಂಭಿಕರಾಗಿ ಬಡ್ತಿ ಪಡೆದಿರುವಾಗ ಅವರ ಮೇಲೆ ಇನ್ನಷ್ಟೂ ನಿರೀಕ್ಷೆ ಹೆಚ್ಚಿದೆ.
ಬ್ಲಾಕ್ ಕ್ಯಾಪ್ಸ್ನ ಕಾಯಂ ನಾಯಕ ಕೇನ್ ವಿಲಿಯಮ್ಸನ್ ಮೂರನೇ ಪಂದ್ಯಕ್ಕೆ ಅಲಭ್ಯರಾಗಿರುವುದು ಕಿವೀಸ್ನ ದೊಡ್ಡ ವೀಕ್ನೆಸ್. ಕೇನ್ ಜಾಗಕ್ಕೆ ಮಾರ್ಕ್ ಚಾಂಪ್ಮನ್ ಸೇರ್ಪಡೆಯಾಗಲಿದ್ದಾರೆ. ತಂಡದ ನಾಯಕತ್ವವನ್ನು ವೇಗಿ ಟಿಮ್ ಸೌಥೀ ಕೈಗೆ ನೀಡಲಾಗಿದೆ. ವಿಲಿಯಮ್ಸನ್ ಜಾಗಕ್ಕೆ ಮರಳಿರುವ ಮಾರ್ಕ್ ಚಾಂಪ್ಮನ್ ಬದಲಾಗಿ ಮೈಕಲ್ ಬ್ರೇಸ್ವೆಲ್ ಕೇಸ್ ಸ್ಥಾನ ತುಂಬುವ ಸಾಧ್ಯತೆ ಇದೆ.