ಕರ್ನಾಟಕ

karnataka

By

Published : Apr 30, 2021, 5:45 PM IST

ETV Bharat / sports

ಕೋವಿಡ್ ಹೋರಾಟಕ್ಕೆ ಐಪಿಎಲ್​ ಸಂಬಳದ ಶೇ.10ರಷ್ಟು ದೇಣಿಗೆ: ಉನಾದ್ಕತ್ ಘೋಷಣೆ

ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಅನೇಕ ಕ್ರಿಕೆಟ್ ಪ್ಲೇಯರ್ಸ್​ ಭಾಗಿಯಾಗುತ್ತಿದ್ದು, ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

Jaydev Unadkat
Jaydev Unadkat

ಮುಂಬೈ: ಟೀಂ ಇಂಡಿಯಾ ಬೌಲರ್​ ಜಯದೇವ್​ ಉನಾದ್ಕತ್​ ಕೊರೊನಾ ಹೋರಾಟದಲ್ಲಿ ಕೈಜೋಡಿಸಿದ್ದು, ಐಪಿಎಲ್​ ಸಂಬಳದ ಶೇ.10ರಷ್ಟು ದೇಣಿಗೆ ನೀಡಲು ಮುಂದಾಗಿದ್ದಾರೆ.

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಉನಾದ್ಕತ್​ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿದ್ದು, ಅವರಿಗೆ 3 ಕೋಟಿ ರೂ. ನೀಡಿ ಖರೀದಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​​​ನಲ್ಲಿ ವಿಡಿಯೋ ಹರಿಬಿಟ್ಟಿರುವ ಬೌಲರ್​, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವ ಉದ್ದೇಶದಿಂದ ಕೈಲಾದ ಸಹಾಯ ಮಾಡಿದ್ದೇನೆ ಎಂದಿದ್ದಾರೆ.

ಕೋವಿಡ್ ಹೋರಾಟದಲ್ಲಿ ಈಗಾಗಲೇ ನಿಕೂಲಸ್ ಪೂರನ್​, ಪ್ಯಾಟ್​ ಕಮ್ಮಿನ್ಸ್​, ಬ್ರೆಟ್​ ಲೀ ಜೊತೆ ಸಚಿನ್ ತೆಂಡೂಲ್ಕರ್​ ಸಹ ದೇಣಿಗೆ ನೀಡಿದ್ದಾರೆ.

ಇದನ್ನೂ ಓದಿ: ಭಾರತದ ಕೋವಿಡ್ ಹೋರಾಟಕ್ಕೆ ಸಾಥ್​: ಆಸ್ಟ್ರೇಲಿಯಾ ಕ್ರಿಕೆಟ್ ಮೀಡಿಯಾದಿಂದ 4,200 ಡಾಲರ್ ದೇಣಿಗೆ

ABOUT THE AUTHOR

...view details