ಕರ್ನಾಟಕ

karnataka

By

Published : Oct 30, 2020, 11:46 AM IST

ETV Bharat / sports

ಕೆಕೆಆರ್​ ವಿರುದ್ಧ ಗೆಲುವು ಸಾಧಿಸಲು ಚೆನ್ನೈ ಅದೃಷ್ಟಶಾಲಿಯಾಗಿತ್ತು: ಫ್ಲೆಮಿಂಗ್

ನಾವು ಪಂದ್ಯ ಗೆಲ್ಲಲು ಬೇಕಾದಷ್ಟು ಶ್ರಮ ಹಾಕಿದ್ದೆವು. ಆದರೆ ಜಯ ಸಾಧಿಸಬೇಕಾದ್ರೆ ಸ್ವಲ್ಪ ಅದೃಷ್ಟ ಮತ್ತು ಕೆಲ ತಿರುವು ಬೇಕಾಗುತ್ತದೆ ಎಂದು ಸಿಎಸ್​ಕೆ ತರಬೇತುದಾರ ಹೇಳಿದ್ದಾರೆ.

Chennai Super Kings were lucky to win
ಸ್ಟೀಫನ್ ಫ್ಲೆಮಿಂಗ್

ದುಬೈ: ದುಬೈನಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರು ವಿಕೆಟ್ ಜಯ ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅದೃಷ್ಟಶಾಲಿ ಎಂದು ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಸಿಎಸ್​ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್, "ರಾಯುಡು ಮತ್ತು ರುತುರಾಜ್ ಉತ್ತಮವಾಗಿ ಬ್ಯಾಟ್ ಬೀಸಿದ್ರು. ಇಬ್ಬರು ಆಟಗಾರರ ವಿಕೆಟ್ ಕಳೆದುಕೊಂಡ ನಂತರ ಕೆಕೆಆರ್​ ತಂಡ ಕೊಂಚ ಮೇಲುಗೈ ಸಾಧಿಸಿತು. ನಂತರ ನಮ್ಮ ತಂಡ ಕಂಬ್ಯಾಕ್ ಮಾಡಿತು. ಕೊನೆಯ ಎರಡು ಓವರ್​ಗಳು ತುಂಬಾ ಕುತೂಹಲ ಮೂಡಿಸಿದ್ದವು. ಅಂತಿಮವಾಗಿ ತಂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಟೀಫನ್ ಫ್ಲೆಮಿಂಗ್, ಸಿಎಸ್​​ಕೆ ತಂಡದ ಕೋಚ್

"ನಾವು ಪಂದ್ಯ ಗೆಲ್ಲಲು ಬೇಕಾದಷ್ಟು ಶ್ರಮ ಹಾಕಿದ್ದೆವು. ಆದರೆ ಜಯ ಸಾಧಿಸಬೇಕಾದ್ರೆ ಸ್ವಲ್ಪ ಅದೃಷ್ಟ ಮತ್ತು ಕೆಲ ತಿರುವು ಬೇಕಾಗುತ್ತದೆ" ಎಂದು ಸಿಎಸ್​ಕೆ ತರಬೇತುದಾರ ಹೇಳಿದ್ದಾರೆ.

"ಅವರು ಉತ್ತಮವಾಗಿ ಬೌಲ್ ಮಾಡಿ ಒತ್ತಡ ಸೃಷ್ಟಿಸಿದರು. ನಾವು ವಿಕೆಟ್ ಕಳೆದುಕೊಂಡಾಗ ಅವರು ಪರಿಣಾಮಕಾರಿಯಾಗಿ ದಾಳಿ ನಡೆಸಿದ್ರು. ಕೆಕೆಆರ್​ ಬೌಲರ್​ಗಳು ಎಸೆದ 80ರಷ್ಟು ಓವರ್​ಗಳನ್ನು ನಮ್ಮ ಇಬ್ಬರು ಹುಡುಗರು ಎದುರಿಸಿದ್ದು ಮುಖ್ಯವಾಗಿತ್ತು" ಎಂಂದು ಫ್ಲೆಮಿಂಗ್ ಹೇಳಿದ್ದಾರೆ.

ಕೆಕೆಆರ್​ ನೀಡಿದ 173 ರನ್​ಗಳ ಗುರಿ ಬೆನ್ನತ್ತಿದ ಸಿಎಸ್​ಕೆ ಕೊನೆಯ ಎಸೆತದಲ್ಲಿ ಜಡೇಜಾ ಸಿಡಿಸಿದ ಸಿಕ್ಸರ್​ ಹಾಗೂ ಗಾಯಕ್ವಾಡ್​ ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್​ಗಳ ಜಯ ಸಾಧಿಸುವ ಜೊತೆಗೆ ಕೆಕೆಆರ್​ ಪ್ಲೇ ಆಫ್ ಕನಸಿಗೆ ತಣ್ಣೀರು ಎರಚಿದೆ. ಗಾಯಕ್ವಾಡ್​ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 72 ರನ್​ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

ABOUT THE AUTHOR

...view details