ಮುಂಬೈ: ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ಆರಂಭಗೊಳ್ಳಲಿರುವ ಟಿ-20 ಕ್ರಿಕೆಟ್ ಸರಣಿಗಾಗಿ ಟೀಂ ಇಂಡಿಯಾ ಆಯ್ಕೆಗೊಂಡಿದ್ದು, ಅದಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಮಾತನಾಡಿದ್ದಾರೆ.
ತಂಡ ಪ್ರಕಟ ಮಾಡಿದ ಬಳಿಕ ಮಾತನಾಡಿರುವ ಎಂಎಸ್ಕೆ ಪ್ರಸಾದ್, ಮುಂದಿನ 6-7 ವರ್ಷಗಳವರೆಗೆ ಭಾರತೀಯ ಕ್ರಿಕೆಟ್ ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ ನಾವು ಎಲ್ಲ ರೀತಿಯ ಮಾದರಿಯ ಕ್ರಿಕೆಟ್ನಲ್ಲೂ ಸಾಕಷ್ಟು ಬೆಂಚ್ ಬಲ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಸರಣಿಗಾಗಿ ಎಡಗೈ ಆರಂಭಿಕ ಶಿಖರ್ ಧವನ್ ಹಾಗೂ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಉಳಿದಂತೆ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ವೇಗಿ ಮೊಹಮ್ಮದ್ ಶಮಿ ವಿಶ್ರಾಂತಿ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಜನವರಿ 5ರಿಂದ ಮೂರು ಟಿ-20 ಪಂದ್ಯಗಳ ಸರಣಿಯನ್ನಾಡಲಿದ್ದು, ಇದಾದ ಬಳಿಕ ಜನವರಿ 14ರಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಈ ಎರಡು ಸರಣಿ ಮುಕ್ತಾಯಗೊಂಡ ಬಳಿಕ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದೆ.
ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ(ಟಿ-20 ಸರಣಿ):ವಿರಾಟ್ ಕೊಹ್ಲಿ(ಕ್ಯಾಪ್ಟನ್), ಶಿಖರ್ ಧವನ್,ಕೆಎಲ್ ರಾಹುಲ್,ಶ್ರೇಯಸ್ ಅಯ್ಯರ್,ರಿಷಭ್ ಪಂತ್(ವಿಕೆಟ್ ಕೀಪರ್)ರವೀಂದ್ರ ಜಡೇಜಾ,ಶಿವಂ ದುಬೆ,ಯಜುವೇಂದ್ರ ಚಹಾಲ್,ಕುಲ್ದೀಪ್ ಯಾದವ್,ಜಸ್ಪ್ರೀತ್ ಬುಮ್ರಾ,ನವದೀಪ್ ಸೈನಿ,ಶಾರ್ದೂಲ್ ಠಾಕೂರ್,ಮನೀಷ್ ಪಾಂಡೆ,ವಾಷಿಂಗ್ಟನ್ ಸುಂದರ್,ಸಂಜು ಸ್ಯಾಮ್ಸನ್,
ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ(ಏಕದಿನ ಸರಣಿ):ವಿರಾಟ್ ಕೊಹ್ಲಿ(ಕ್ಯಾಪ್ಟನ್)ಶಿಖರ್ ಧವನ್,ರೋಹಿತ್ ಶರ್ಮಾ,ಕೆಎಲ್ ರಾಹುಲ್,ಶ್ರೇಯಸ್ ಅಯ್ಯರ್,ಮನೀಷ್ ಪಾಂಡೆ,ರಿಷಭ್ ಪಂತ್(ವಿ,ಕೀ), ಕೇದಾರ್ ಜಾಧವ್,ಶಿವಂ ದುಬೆ,ರವೀಂದ್ರ ಜಡೇಜಾ,ಕುಲ್ದೀಪ್ ಯಾದವ್,ಯಜುವೇಂದ್ರ ಚಹಾಲ್,ನವದೀಪ್ ಸೈನಿ,ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ