ಕರ್ನಾಟಕ

karnataka

ಮಂಕಡ್​ ರನ್​ ಔಟ್​ಗೆ ಮಾನ್ಯತೆ ಇಲ್ಲ ಎಂದು ಟೂರ್ನಿಗೂ ಮೊದಲೇ ಚರ್ಚಿಸಲಾಗಿತ್ತು: ರಾಜೀವ್​ ಶುಕ್ಲಾ

By

Published : Mar 26, 2019, 8:16 PM IST

ಟೂರ್ನಿಗೂ ಮೊದಲೆ ಮಂಕಡ್​ಗೆ ಯಾವುದೇ ಅವಕಾಶವಿಲ್ಲ ಎಂದು ಚರ್ಚಿಸಿದ್ದೆವು ಎಂದು ಐಪಿಎಲ್​ ಚೇರ್ಮನ್​ ಟ್ವೀಟ್​ ಮಾಡಿ ಅಶ್ವಿನ್​ಗೆ ಶಾಕ್​ ನೀಡಿದ್ದಾರೆ.

ಮಂಕಡ್​

ನವದೆಹಲಿ: ಐಪಿಎಲ್​ ಟೂರ್ನಿಗೂ ಮೊದಲೆ ಎಂಎಸ್​ ಧೋನಿ, ವಿರಾಟ್​ ಕೊಹ್ಲಿ ಹಾಗೂ ವಿವಿಧ ತಂಡಗಳ ನಾಯಕರ ಜೊತೆ ಐಪಿಎಲ್​ ಟೂರ್ನಿಯಲ್ಲಿ ಮಂಕಡ್​ ರನ್​ಔಟ್​ ಮಾಡಬಾರದೆಂದು ಚರ್ಚಿಸಲಾಗಿತ್ತೆಂದು ಐಪಿಎಲ್​ ಅಧ್ಯಕ್ಷ ರಾಜೀವ್​ ಶುಕ್ಲಾ ತಿಳಿಸಿದ್ದಾರೆ.

ನಿನ್ನೆ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ನಾಯಕ ಆರ್​ ಅಶ್ವಿನ್​ ರಾಯಲ್ಸ್​ ತಂಡದ ಆರಂಭಿಕ ಆಟಗಾರ ಜಾಸ್​ ಬಟ್ಲರ್​ ಅವರನ್ನು 'ಮಂಕಡ್' ಮೂಲಕ ರನೌಟ್ ಮಾಡಿದ್ದರು. ನಂತರದ ಸುದ್ದಿಗೋಷ್ಠಿಯಲ್ಲಿ ಮಂಕಡ್ಅನ್ನು ಕ್ರಿಕೆಟ್​ ನಿಯಮದಲ್ಲಿ ಸೇರಿಸಲಾಗಿದೆ. ಇದರಲ್ಲಿ ಕ್ರೀಡಾಸ್ಪೂರ್ತಿ ಮಾತೇ ಬರುವುದಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

ಅಶ್ವಿನ್​ರ ಮಂಕಡ್​ಗೆ ಕ್ರಿಕೆಟ್​ ವಲಯದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿರುವಾಗಲೆ ಐಪಿಎಲ್​ ಅಧ್ಯಕ್ಷ ರಾಜೀವ್​ ಶುಕ್ಲಾ ಈ ಕುರಿತು ಸ್ಪಷ್ಟನೆ ನೀಡಿದ್ದು, ಐಪಿಎಲ್ ಟೂರ್ನಿಯ ಆರಂಭಕ್ಕೂ ಮೊದಲೇ ಮಹೇಂದ್ರ ಸಿಂಗ್​ ಧೋನಿ, ಕೊಹ್ಲಿ ಸೇರಿದಂತೆ ವಿವಿಧ ತಂಡಗಳ ನಾಯಕರೊಂದಿಗಿನ ಸಭೆಯಲ್ಲಿ ಮಂಕಡ್​ಗೆ ಐಪಿಎಲ್​ನಲ್ಲಿ ಯಾವುದೇ ಮಾನ್ಯತೆ ಇಲ್ಲಎಂದು ಚರ್ಚಿಸಲಾಗಿತ್ತು ಎಂದು ಹೇಳುವ ಮೂಲಕ ಅಶ್ವಿನ್​ಗೆ ಶಾಕ್​ ನೀಡಿದ್ದಾರೆ.

ಬಿಸಿಸಿಐ ಹೇಳಿಕೆ ಏನು?

ಮಂಕಡ್​ ಎಂಬುದು ಕ್ರಿಕೆಟ್​ನಲ್ಲಿ ಬ್ಯಾಟ್ಸಮನ್​ಗಳನ್ನು ಔಟ್​ ಮಾಡಲು ಕ್ರಿಕೆಟ್​ ಕೌಶಲ್ಯಗಳನ್ನು ಉಪಯೋಗಿಸಬೇಕೆ ಹೊರೆತು ವಾಮಮಾರ್ಗದ ಮೂಲಕ ಎದುರಾಳಿಯನ್ನು ಔಟ್​ ಮಾಡುವ ಕೌಶಲ್ಯಗಳಿಂದಲ್ಲ. ಕ್ರಿಕೆಟ್​ ಎಂಬುದು ಜಂಟಲ್​ಮ್ಯಾನ್​ ಗೇಮ್​. ಇದರಲ್ಲಿ ಈ ರೀತಿಯ ಅಗೌರವಯುತ ನಡವಳಿಕೆ ಸರಿಯಲ್ಲ ಎಂದಿರುವ ಅವರು ಕ್ರಿಕೆಟ್​ ಲಾ ತಿಳಿದುಕೊಂಡಿರುವ ಅಶ್ವಿನ್ ಸ್ಪಿರಿಟ್​ ಆಫ್​ ಗೇಮ್​ ಬಗ್ಗೆಯೂ ಅಲೋಚಿಸಬೇಕೆಂದು ತಿಳಿಸಿದ್ದಾರೆ.

ಮತ್ತೊಬ್ಬ ಅಧಿಕಾರಿ ಈ ಕುರಿತು ಮಾತನಾಡಿದ್ದು ಅಶ್ವಿನ್​ ಬಟ್ಲರ್​ ಅವರನ್ನು ರನ್​ಔಟ್​ ಮಾಡಿದ್ದು ಬೆನ್ನಿಗೆ ಚೂರಿ ಹಾಕಿದಂತೆ. ಈ ರೀತಿ ಗೆಲುವು ಸಾಧಿಸುವುದು ಉತ್ತಮ ಕ್ರಮವಲ್ಲ ಎಂದಿದ್ದಾರೆ.

ಅದೇ ರೀತಿ ಪಂದ್ಯದ ನಂತರ ಬಟ್ಲರ್​, ಎದುರಾಳಿ ಆಟಗಾರರ ಕೈಕುಲುಕುವ ವೇಳೆ ಅಶ್ವಿನ್​ರನ್ನು ಬಿಟ್ಟು ಉಳಿದ ಆಟಗಾರರ ಕೈಕುಲುಕಿದ್ದು ಕೂಡ ಕ್ರೀಡಾ ಸ್ಪೂರ್ತಿ ಮರೆತಂತೆ ಎಂದು ಸಹಾ ಬಿಸಿಸಿಐ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.​

ABOUT THE AUTHOR

...view details