ಕರ್ನಾಟಕ

karnataka

By

Published : Jul 15, 2019, 4:37 PM IST

ETV Bharat / sitara

ಅಭಿಮಾನಿ ಬೆನ್ನಮೇಲೆ ಮೂಡಿದ ದುರ್ಯೋಧನ !

ಸ್ಯಾಂಡಲ್​ವುಡ್​​​ ಬಾಕ್ಸಾಫೀಸ್​ ಸುಲ್ತಾನ್ ದರ್ಶನ್ ಕರುನಾಡಿನಾದ್ಯಂತ ಅಭಿಮಾನಿಗಳ ಬಳಗ ಸಂಪಾದಿಸಿದ್ದಾರೆ. ತಮ್ಮನ್ನು ಸೆಲಬ್ರಿಟಿಯಂತೆ ಕಾಣುವ ದಾಸನಿಗೆ ​ಅಭಿಮಾನಿ ವರ್ಗ ಎಲ್ಲಿಲ್ಲದ ಪ್ರೀತಿ ನೀಡ್ತಾರೆ. ದರ್ಶನ್ ಹೆಸರು, ಇವರ ಸಿನಿಮಾಗಳ ಶೀರ್ಷಿಕೆಗಳನ್ನು ಮೈಮೇಲೆ ಬರೆದುಕೊಂಡು ಸಂಭ್ರಮಿಸುತ್ತಾರೆ.

ದುರ್ಯೋಧನ

ಸಾರಥಿಯ ಅಭಿಮಾನಿ ಹರೀಶ್ ದುರ್ಯೋಧನನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಮ್ಮ ಬೆನ್ನಮೇಲೆ ಕುರುಕ್ಷೇತ್ರದಲ್ಲಿ ದರ್ಶನ್ ನಿಭಾಯಿಸಿರುವ ಸುಯೋಧನ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ದರ್ಶನ್ ನಟನೆಯ 50ನೇ ಚಿತ್ರ ಕುರುಕ್ಷೇತ್ರ ಸಿನಿಮಾ ಕ್ರೇಜ್ ಹೆಚ್ಚಿದೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ದಾಸನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಹರೀಶ್​ ಕುರುಕ್ಷೇತ್ರದ ಲುಕ್​ ಬರೆಯಿಸಿಕೊಂಡು ಸಿನಿಮಾ ನೋಡಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಅಭಿಮಾನಿಯ ಬೆನ್ನಮೇಲೆ ಕೌರವಾಧಿಪತಿ ದುರ್ಯೋಧನ ಟ್ಯಾಟೂ

'ಡಿ ಬಾಸ್' ನಮ್ಮ ದೇವರು ಎನ್ನುವ ಈ ಅಭಿಮಾನಿ 28-30 ಇಂಚು ವಿಸ್ತೀರ್ಣದ ಟ್ಯಾಟೂ ಬಿಡಿಸಿಕೊಂಡಿದ್ದಾರೆ. ಬನಶಂಕರಿ ಫಸ್ಟ್ ಸ್ಟೇಜ್ ನ‌ರಾಯಲ್ ಟ್ಯಾಟೂ ಶಾಪ್​​ನ ಕಲಾವಿದ ಶಿವರಾಜ್ 24 ಗಂಟೆಗಳಲ್ಲಿ ಈ ಸುಂದರ ಚಿತ್ರವನ್ನು ಬಿಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details