ಲೋಕಸಭಾ ಚುನಾವಣೆ ಕಾವು ಕನ್ನಡ ಸಿನಿಮಾಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮಾರ್ಚ್ 29 ರಂದು ಬಿಡುಗಡೆಯಾಗಬೇಕಿದ್ದ ‘ತ್ರಯಂಬಕಂ’ ಸಿನಿಮಾ ಈಗ ಮೊದಲ ಹಂತದ ಮತದಾನದ ಮರುದಿನ ಬಿಡುಗಡೆ ಮಾಡಲು ನಿರ್ದೇಶಕ ದಯಾಳ್ ಪದ್ಮನಾಭನ್ ತೀರ್ಮಾನಿಸಿದ್ದಾರೆ.
ಫ್ಯೂಚರ್ ಎಂಟ್ರಟೈನ್ಮೆಂಟ್ ನಿರ್ಮಾಣದ ತ್ರಯಂಬಕಂ ಚಿತ್ರಕ್ಕೆ ಕಥೆ, ಚಿತ್ರಕಥೆ ದಯಾಳ್ ಪದ್ಮನಾಭನ್ ಬರೆದಿದ್ದಾರೆ. ರಾಘವೇಂದ್ರ ರಾಜಕುಮಾರ್ ಜೊತೆ ರೋಹಿತ್, ಅನುಪಮಾ ಗೌಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಶ್.ಯು. ಶೆಟ್ಟಿ ಕಾರ್ಯಕಾರಿ ನಿರ್ಮಾಪಕರು.