ಕರ್ನಾಟಕ

karnataka

By

Published : Mar 14, 2019, 1:39 PM IST

ETV Bharat / sitara

ಚಿತ್ರರಂಗದ ಮೇಲೆ ಚುನಾವಣೆ ಎಫೆಕ್ಟ್​​...'ತ್ರಯಂಬಕಂ' ರಿಲೀಸ್ ಪೋಸ್ಟ್​​​​ಪೋನ್

ರಾಘಣ್ಣ 14 ವರ್ಷಗಳ ಬಳಿಕ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ. ಅವರು ನಟಿಸಿರುವ ಅಮ್ಮನ ಮನೆ ಚಿತ್ರ ಕಳೆದ ವಾರ ಬಿಡುಗಡೆಯಾಗಿತ್ತು. ಇದೇ ತಿಂಗಳು 'ತ್ರಯಂಬಕಂ' ಬಿಡುಗಡೆಯಾಗಬೇಕಿತ್ತು. ಒಂದು ವೇಳೆ ಈ ಚಿತ್ರ ರಿಲೀಸ್ ಆಗಿದ್ದರೆ ರಾಘವೇಂದ್ರ ರಾಜಕುಮಾರ್​ ಸಿನಿ ಕರಿಯರ್​ನಲ್ಲಿ ಒಂದು ದಾಖಲೆಯಾಗುತ್ತಿತ್ತು. ಯಾಕಂದ್ರೆ ಇದುವರೆಗೂ ಒಂದೇ ತಿಂಗಳಿನಲ್ಲಿ ಅವರ ಎರಡು ಚಿತ್ರಗಳು ಬಿಡುಗಡೆಯಾಗಿಲ್ಲ.

ಏ.19ಕ್ಕೆ ತ್ರಯಂಬಕಂ ರಿಲೀಸ್ ಪೋಸ್ಟ್​​​​ಪೋನ್

ಲೋಕಸಭಾ ಚುನಾವಣೆ ಕಾವು ಕನ್ನಡ ಸಿನಿಮಾಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮಾರ್ಚ್ 29 ರಂದು ಬಿಡುಗಡೆಯಾಗಬೇಕಿದ್ದ ‘ತ್ರಯಂಬಕಂ’ ಸಿನಿಮಾ ಈಗ ಮೊದಲ ಹಂತದ ಮತದಾನದ ಮರುದಿನ ಬಿಡುಗಡೆ ಮಾಡಲು ನಿರ್ದೇಶಕ ದಯಾಳ್ ಪದ್ಮನಾಭನ್ ತೀರ್ಮಾನಿಸಿದ್ದಾರೆ.

ಫ್ಯೂಚರ್ ಎಂಟ್ರ​​ಟೈನ್​ಮೆಂಟ್​ ​ ನಿರ್ಮಾಣದ ತ್ರಯಂಬಕಂ ಚಿತ್ರಕ್ಕೆ ಕಥೆ, ಚಿತ್ರಕಥೆ ದಯಾಳ್ ಪದ್ಮನಾಭನ್ ಬರೆದಿದ್ದಾರೆ. ರಾಘವೇಂದ್ರ ರಾಜಕುಮಾರ್ ಜೊತೆ ರೋಹಿತ್, ಅನುಪಮಾ ಗೌಡ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಶ್​.ಯು. ಶೆಟ್ಟಿ ಕಾರ್ಯಕಾರಿ ನಿರ್ಮಾಪಕರು.

ಗಣೇಶ್ ನಾರಾಯಣ್ ಸಂಗೀತ, ಬಿ.ರಾಕೇಶ್ ಛಾಯಾಗ್ರಹಣ, ಸುನಿಲ್ ಕಶ್ಯಪ್ ಸಂಕಲನ, ವೆಂಕಟ್ ದೇವ್ ಸಹ ನಿರ್ದೇಶನ ಇರುವ ಈ ಚಿತ್ರಕ್ಕೆ ಸಂಭಾಷಣೆ ನವೀನ್ ಕೃಷ್ಣ ಬರೆದಿದ್ದಾರೆ. ಹಾಡುಗಳನ್ನು ಫಣಿಶ್ ರಾಜ, ಸಂತೋಷ್ ನಾಯಕ್, ಅಭಿ ರಚಿಸಿದ್ದಾರೆ.

ಏ.19ಕ್ಕೆ ತ್ರಯಂಬಕಂ ರಿಲೀಸ್ ಪೋಸ್ಟ್​​​​ಪೋನ್

ಇನ್ನು ರಾಜ್ಯದಲ್ಲಿ ಏಪ್ರಿಲ್​ 18 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಇದರ ಮರುದಿನ ಅಂದ್ರೆ 19 ರಂದು ತ್ರಯಂಬಂಕಂ ಸಿನಿಮಾ ರಿಲೀಸ್ ಆಗಲಿದೆ.

For All Latest Updates

TAGGED:

ABOUT THE AUTHOR

...view details