ದಿವಂಗತ ಎ ಆರ್ ಬಾಬು ಅನೇಕ ಸಿನಿಮಾಗಳನ್ನು ನಿರ್ದೇಶಿಸಿ, ಪ್ರೇಮ್ ಅಂತ ನಿರ್ದೇಶಕರನ್ನು ಬೆಳಕಿಗೆ ತಂದವರು. ಅಗಾಗೆ ಅವರು ಚಿತ್ರಗಳಲ್ಲೂ ಅಭಿನಯಿಸುತ್ತಿದ್ದರು. ಇವರು ಕಳೆದ ವರ್ಷ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದರು. ಗಿರ್ಗಿಟ್ಲೆ ಇವರು ನಟಿಸಿರುವ ಕೊನೆಯ ಚಿತ್ರವಾಯಿತು.
ಕಾಲವಾದ ಇಬ್ಬರು ತಾರೆಯರ ಕಡೆ ಸಿನಿಮಾ ಇಂದು ಬಿಡುಗಡೆ
ಈ ವಾರ ತೆರೆ ಕಂಡಿರುವ ಆರು ಕನ್ನಡ ಸಿನಿಮಾಗಳಲ್ಲಿ ‘ಗಿರ್ಗಿಟ್ಲೆ’ ಮಾತ್ರ ಹೆಚ್ಚು ಗಮನ ಸೆಳೆಯುತ್ತಿದೆ. ಇದು ಕಾಲವಾಗಿರುವ ನಿರ್ದೇಶಕ ಎ.ಆರ್. ಬಾಬು ಮತ್ತು ಖಳನಟ ರಾಘವ್ ಉದಯ್ ಅವರುಗಳು ನಟಿಸಿರುವ ಕಡೆಯ ಸಿನಿಮಾ.
ದಿವಂಗತ ಎ.ಆರ್.ಬಾಬು ಹಾಗೂ ಖಳನಟ ಉದಯ್
ಇನ್ನು ರಾಘವ್ ಉದಯ್ 2016 ನವೆಂಬರ್ 8 ರಂದು ಮಾಸ್ತಿಗುಡಿ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್ನಿಂದ ಅನಿಲ್ ಜೊತೆ ಹಾರಿ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ ಪ್ರಾಣ ಕಳೆದುಕೊಂಡರು. ಉದಯ್ ಈ ವಾರದ ‘ಗಿರ್ಗಿಟ್ಲೆ’ ಕನ್ನಡ ಸಿನಿಮಾದಲ್ಲಿ ಮುಖ್ಯ ಖಳನ ಪಾತ್ರ ನಿರ್ವಹಿಸಿದ್ದಾರೆ. ಅವರು 2016 ನವೆಂಬರ್ ತಿಂಗಳಿಗೂ ಮುಂಚೆ ಚಿತ್ರದಲ್ಲಿ ಅಭಿನಯಿಸಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಸಹ ಮಾಡಿದ್ದರು.
ಎ ಆರ್ ಬಾಬು ಮತ್ತು ರಾಘವ್ ಉದಯ್ ನೆನಪಿನೊಂದಿಗೆ ‘ಗಿರ್ಗಿಟ್ಲೆ’ ಈ ವಾರ ಬಿಡುಗಡೆ ಭಾಗ್ಯ ಮೂರು ವರ್ಷಗಳ ನಂತರ ಕಾಣುತ್ತಿದೆ.