ಕರ್ನಾಟಕ

karnataka

By

Published : Apr 13, 2020, 11:46 AM IST

ETV Bharat / sitara

ಗೀತ ರಚನೆ, ನಿರ್ದೇಶನ ಅಷ್ಟೇ ಅಲ್ಲ, ಹಾಡೋಕು ನಾನ್‌  ರೆಡಿ ಅಂದ್ರು ಕೆ ಕಲ್ಯಾಣ್​..

ಚಿಕ್ಕ ವಯಸ್ಸಿನಲ್ಲಿ ಪ್ರೀತಿ ಮಾಡಿದರೆ ಆಗುವ ಅನಾಹುತಗಳ ಪರಿಚಯ ಸಹ ಇದೆ. ಸಕಲೇಶಪುರ, ಮಂಗಳೂರು, ಮಡಿಕೇರಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಆಗಿ ಸದ್ಯಕ್ಕೆ ಡಿ ಐ ತಂತ್ರಜ್ಞಾನ ಹಂತದಲ್ಲಿದೆ. ವೆಂಕಟೇಶ್ ಹಾಗೂ ರಶ್ಮಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಕೆ ಕಲ್ಯಾಣ್​
ಕೆ ಕಲ್ಯಾಣ್​

ಕನ್ನಡ ಸಿನಿಮಾ ಕ್ಷೇತ್ರದಲ್ಲಿ ‘ಅಮೃತ ವರ್ಷಿಣಿ’ ಇಂದ ಜನಪ್ರಿಯತೆ ಸಂಪಾದಿಸಿಕೊಂಡು ತಮ್ಮ ಗೀತ ರಚನೆ ಕ್ಷೇತ್ರದಲ್ಲಿ ನೂರಾರು ಕನ್ನಡ ಸಿನಿಮಾಗಳಿಗೆ ಉತ್ತಮ ಸಾಹಿತ್ಯ ನೀಡುತ್ತಾ ಬಂದಿರುವ ಕೆ. ಕಲ್ಯಾಣ್ ಸಂಗೀತ ನಿರ್ದೇಶಕರೂ ಹೌದು. ಅವರು ಒಂದು ಸಿನಿಮಾದ ನಿರ್ದೇಶನ ಸಹ ಮಾಡಿದ್ದಾರೆ. 2017ರಲ್ಲಿ ವಾಚ್ಮನ್ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದರೂ ಅದು ಇನ್ನೂ ಬಿಡುಗಡೆ ಆಗಿಲ್ಲ.

ಕೆ ಕಲ್ಯಾಣ್ ಹಾಡಿರುವ ಹಾಡು ಊರ್ ತುಂಬಾ ಹೂಡಿಗೀರ್ ನಮಗಂತ ಯಾರವರೋ.. ಯಾರೊಬ್ಬರು ಸಿಗ್ತಾ ಇಲ್ವಲ್ಲೋ.. ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದ ಗೀತೆ. ‘ಜೊತೆಯಾಗಿರು’ ಕನ್ನಡ ಸಿನಿಮಾಕ್ಕೆ ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಸತೀಶ್‌ಕುಮಾರ್ ಈ ಹಿಂದೆ ‘ಅಲೆ ಮತ್ತು ಅಜರಾಮರ’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕ ಆಗಿದ್ದವರು ಈಗ ಪೂರ್ಣ ಪ್ರಮಾಣದ ನಿರ್ದೇಶಕ ಆಗುತ್ತಿದ್ದಾರೆ.

ಸಾಹಿತಿ ಕೆ ಕಲ್ಯಾಣ್​

‘ಜೊತೆಯಾಗಿರು’ ಒಂದು ಹದಿಹರೆಯದ ಪ್ರೇಮ ಕಥೆ. ಚಿಕ್ಕ ವಯಸ್ಸಿನಲ್ಲಿ ಪ್ರೀತಿ ಮಾಡಿದರೆ ಆಗುವ ಅನಾಹುತಗಳ ಪರಿಚಯ ಸಹ ಇದೆ. ಸಕಲೇಶಪುರ, ಮಂಗಳೂರು, ಮಡಿಕೇರಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಆಗಿ ಸದ್ಯಕ್ಕೆ ಡಿ ಐ ತಂತ್ರಜ್ಞಾನ ಹಂತದಲ್ಲಿದೆ. ವೆಂಕಟೇಶ್ ಹಾಗೂ ರಶ್ಮಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸುನಿಲ್, ಕಾಂಚನ, ಪೂಜಾ ಪೋಷಕ ಪಾತ್ರಗಳಲ್ಲಿದ್ದಾರೆ. ರೇಣು ಮೊವೀಸ್ ಅಡಿಯಲ್ಲಿ ಗೆಳೆಯರು ಸೇರಿ ಈ ಸಿನಿಮಾ ಮಾಡಿದ್ದಾರೆ.

ಆನಂದ್ ಮತ್ತು ರಾಜ ಶಿವಶಂಕರ್ ಛಾಯಾಗ್ರಹಣ ಮತ್ತು ಸತೀಶ್ ಚಂದ್ರಯ್ಯ ಸಂಕಲನ ಒದಗಿಸಿದ್ದಾರೆ.

ABOUT THE AUTHOR

...view details