ಕರ್ನಾಟಕ

karnataka

By

Published : Feb 21, 2019, 3:49 PM IST

ETV Bharat / sitara

ನಟ ದರ್ಶನ್​​ ಕ್ಲಿಕ್ಕಿಸಿದ ಛಾಯಾಚಿತ್ರಗಳ ಪ್ರದರ್ಶನ

ಚಾಲೆಂಜಿಂಗ್ ಸ್ಟಾರ್ ದರ್ಶನ್​ ಒಳ್ಳೆಯ ನಟ ಮಾತ್ರ ಅಲ್ಲ ಒಳ್ಳೆಯ ಫೋಟೋಗ್ರಾಫರ್ ಕೂಡಾ. ದರ್ಶನ್ ಸಫಾರಿಗೆ ಹೋದರೆ ಸಾಕು ತಮ್ಮೊಂದಿಗೆ ಕ್ಯಾಮರಾ ಕೂಡಾ ಕೊಂಡೊಯ್ಯುತ್ತಾರೆ. ಇದೀಗ ದರ್ಶನ್ ಸೆರೆಹಿಡಿದ ಫೋಟೋಗಳ ಪ್ರದರ್ಶನವನ್ನು ಮೈಸೂರಿನಲ್ಲಿ ಏರ್ಪಡಿಸಲಾಗಿದೆ.

ದರ್ಶನ್​ ಫೋಟೋಗ್ರಫಿ

ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಪ್ರಾಣಿಪ್ರಿಯರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಅವರ ಫಾರ್ಮ್​ ಹೌಸ್​​ನಲ್ಲಿ ಅನೇಕ ತಳಿಯ ಪ್ರಾಣಿ, ಪಕ್ಷಿಗಳಿವೆ. ಮೈಸೂರು ಮೃಗಾಲಯದಿಂದ ಕೂಡಾ ಕೆಲವು ಪ್ರಾಣಿಗಳನ್ನು ದತ್ತು ಪಡೆದು ಅವರು ಸಲಹುತ್ತಿದ್ದಾರೆ.

ದರ್ಶನ್​ ಫೋಟೋಗ್ರಫಿ

ಇನ್ನು ದರ್ಶನ್​ ಒಳ್ಳೆಯ ಫೋಟೋಗ್ರಾಫರ್ ಕೂಡಾ. ದರ್ಶನ್ ಕ್ಲಿಕ್ಕಿಸಿರುವ ಫೋಟೋಗನ್ನು ನೋಡಲು ಅಭಿಮಾನಿಗಳಿಗೊಂದು ಅವಕಾಶ ಸಿಕ್ಕಿದೆ. ಕರ್ನಾಟಕ ಅರಣ್ಯ ಇಲಾಖೆ ಸಹಯೋಗದೊಂದಿಗೆ ಮೈಸೂರಿನಲ್ಲಿ ‘ಲೈಫ್ ಆನ್ ವೈಲ್ಡ್ ಸೈಡ್’ ಹೆಸರಿನ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಮಾರ್ಚ್ 1, 2 ಹಾಗೂ 3 ರಂದು ಸಂದೇಶ್ ಪ್ರಿನ್ಸ್ ಹೊಟೇಲ್​ನಲ್ಲಿ ನೀವು ದರ್ಶನ್ ಛಾಯಾಚಿತ್ರ ಪ್ರದರ್ಶನ ನೋಡಬಹುದು.

ದರ್ಶನ್​ ಫೋಟೋಗ್ರಫಿ

ದರ್ಶನ್ ಸೆರೆ ಹಿಡಿದಿರುವ ವನ್ಯಜೀವಿಗಳ ಫೋಟೋವನ್ನು 2000 ರೂಪಾಯಿ ಕೊಟ್ಟು ಪಡೆಯಬಹುದು. 2500 ರೂಪಾಯಿ ನೀಡಿದರೆ ದರ್ಶನ್ ಸಹಿ ಹಾಕಿದ ಫೋಟೋ ಕೂಡಾ ಲಭ್ಯವಾಗಲಿದೆ. ಈ ಮೂರೂ ದಿನಗಳ ಛಾಯಾಚಿತ್ರ ಪ್ರದರ್ಶನದಿಂದ ಬಂದ ಹಣವನ್ನು ವನ್ಯಜೀವಿ ಸಂರಕ್ಷಣಾ ನಿಧಿಗೆ ಬಳಸಲಾಗುವುದು. ಮಾರ್ಚ್ 3 ರಂದು ವಿಶ್ವ ವನ್ಯ ಜೀವಿ ದಿನವಾಗಿದ್ದು, ದರ್ಶನ್ ಆ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

For All Latest Updates

TAGGED:

ABOUT THE AUTHOR

...view details