ಕರ್ನಾಟಕ

karnataka

ETV Bharat / sitara

ಅಭಿಮಾನದ ಮುಂದೆ ಎಲ್ಲವೂ ನಗಣ್ಯ! ₹1ಲಕ್ಷ ಕೊಟ್ಟು'ಅಮರ್' ಟಿಕೆಟ್ ಪಡೆದ ಅಭಿಮಾನಿ!

ದಾವಣಗೆರೆಯ ಮಂಜುನಾಥ್ ಗುಂಡಲ್​  ಎಂಬುವರು ಮಂಡ್ಯದ ಗಂಡು ಅಂಬರೀಶ್ ಅವರ ಕಟ್ಟಾ ಅಭಿಮಾನಿ. ಇವರು ನರ್ತಕಿ ಚಿತ್ರಮಂದಿರದಲ್ಲಿ ಮೊದಲ ಟಿಕೆಟ​ನ್ನು ಬರೋಬ್ಬರಿ ಒಂದು ಲಕ್ಷ ರೂಪಾಯಿಗೆ ಖರೀದಿಸಿ ಅಭಿಮಾನ ಮೆರೆದಿದ್ದಾರೆ.

By

Published : May 30, 2019, 12:42 PM IST

ಅಮರ್

ಯಂಗ್​ ರೆಬೆಲ್ ಸ್ಟಾರ್​​ ಅಭಿಷೇಕ್ ಅಂಬರೀಶ್​ ಅಭಿನಯದ 'ಅಮರ್'​ ಚಿತ್ರ ನಾಳೆ ಬೆಳ್ಳಿತೆರೆಗೆ ಲಗ್ಗೆ ಇಡುತ್ತಿದೆ. ಅಂಬಿ ಪುತ್ರನ ಚೊಚ್ಚಲ ಚಿತ್ರದ ಕ್ರೇಜ್​ ಬಲು ಜೋರಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ, ಅಭಿಮಾನಿಯೋರ್ವ ಒಂದು ಲಕ್ಷ ರೂಪಾಯಿ ಕೊಟ್ಟು ಮೊದಲ ಟಿಕೆಟ್ ಖರೀದಿಸಿದ್ದಾರೆ!

ದಾವಣಗೆರೆಯ ಮಂಜುನಾಥ್ ಗುಂಡಲ್​ ಎಂಬುವರು ಮಂಡ್ಯದ ಗಂಡು ಅಂಬರೀಶ್ ಅವರ ಕಟ್ಟಾ ಅಭಿಮಾನಿ. ಇವರು ನರ್ತಕಿ ಚಿತ್ರಮಂದಿರದಲ್ಲಿ ಮೊದಲ ಟಿಕೆಟ್​​ನ್ನು ಬರೋಬ್ಬರಿ ಒಂದು ಲಕ್ಷ ನೀಡಿ ಕೊಂಡು, ಅಭಿಮಾನ ಮೆರೆದಿದ್ದಾರೆ. ಪ್ರೀತಿ, ವಿಶ್ವಾಸ, ಅಭಿಮಾನದ ಮುಂದೆ ದುಡ್ಡು ಯಾವ ಲೆಕ್ಕ ಎಂಬುದಕ್ಕೆ ಈ ಅಭಿಮಾನಿಯ ಚಿಂತನೆ ನಿದರ್ಶನ.

ನಾಗಶೇಖರ್​ ನಿರ್ದೇಶನದ 'ಅಮರ್' ಚಿತ್ರಕ್ಕೆ ಅಭಿಷೇಕ್‌ ನಾಯಕರಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ತಾನ್ಯಾಹೋಪ್ ನಟಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಸದ್ಯ ರಾಜ್ಯಾದ್ಯಂತ 'ಅಮರ' ಜ್ವರ ಜೋರಾಗಿದ್ದು ನಾಳೆ ಅದ್ಧೂರಿಯಾಗಿ ಥಿಯೇಟರ್​ಗಳಿಗೆ ದಾಂಗುಡಿ ಇಡಲಿದೆ.

ABOUT THE AUTHOR

...view details