ಕರ್ನಾಟಕ

karnataka

ETV Bharat / jagte-raho

ತಾಳಿ ಕಟ್ಟುವ ಶುಭ ವೇಳೆ ನಡೆಯಿತು ಯುವಕನ ಹೈಡ್ರಾಮಾ... ಯುವತಿಯ ಕನಸು ನುಚ್ಚುನೂರು!

ಇನ್ನೇನೂ ಆ ಜೋಡಿ ಗೃಹಾಸ್ಥಾಶ್ರಮಕ್ಕೆ ಕಾಲಿಡಬೇಕು. ಆದ್ರೆ ಮಂಟಪದಲ್ಲಿ ನಡೆದ ಯುವಕನೊಬ್ಬನ ಹೈಡ್ರಾಮಾದಿಂದ ಆ ವಧು ಹೊತ್ತಿಕೊಂಡಿದ್ದ ಕನಸು ಈಗ ನುಚ್ಚು ನೂರಾಗಿದೆ.

By

Published : Jun 10, 2019, 3:18 PM IST

ತಾಳಿ ಕಟ್ಟುವ ಶುಭ ವೇಳೆ

ಕರ್ನೂಲ್​: ಕೆಲವೇ ಕ್ಷಣಗಳಲ್ಲಿ ಆ ಜೋಡಿ ಮದುವೆಯಾಗಲೂ ರೆಡಿಯಾಗಿತ್ತು. ಆದ್ರೆ ಯುವಕನೊಬ್ಬನ ಕಾರಣನಿಂದ ಆ ಮದುವೆಯೇ ನಿಂತು ಹೋಗಿರುವ ಘಟನೆ ಈಗ ಆಂಧ್ರಪ್ರದೇಶದಲ್ಲಿ ಬಿಸಿ ಬಿಸಿ ಸುದ್ದಿಯಾಗಿದೆ.

ಹೌದು, ಇಲ್ಲಿನ ಡೋನ್​ ನಗರದ ಯುವತಿಗೆ ಆಸ್ಟ್ರೇಲಿಯಾದಲ್ಲಿ ಸಾಫ್ಟವೇರ್​ ಇಂಜಿನಿಯರಿಂಗ್​ ಕೆಲಸ ಮಾಡುತ್ತಿದ್ದ ಯುವಕನೊಂದಿಗೆ ಇದೇ ಭಾನುವಾರ ಮದುವೆ ನಿಶ್ಚಿಯವಾಗಿತ್ತು. ಮದುವೆ ಮಂಟಪದಲ್ಲಿ ಎಲ್ಲರೂ ಸಂತೋಷದಿಂದಲೇ ಕೂಡಿದ್ದರು. ಇನ್ನೇನೂ ಯುವತಿ ಕೊರಳಿಗೆ ಯುವಕ ತಾಳಿ ಕಟ್ಟಬೇಕು ಅನ್ನವಷ್ಟರಲ್ಲೇ ಸಂದ್ಯಾಲ ಗ್ರಾಮದ ಸುರೇಶ್​ ಎಂಬ ಯುವಕ ಮದುವೆ ಮಂಟಪದಲ್ಲಿ ಹೈ ಡ್ರಾಮ ನಡೆಸಿದ್ದಾನೆ.

ಸುರೇಶ್​ ನೇರ ಕಲ್ಯಾಣ ಮಂಟಪಕ್ಕೆ ತೆರಳಿ ವಧುವನ್ನು ನಾನೂ ಪ್ರೀತಿಸುತ್ತಿದ್ದೇನೆ. ಈ ಮದುವೆ ನಡೆಯಲು ನಾನು ಬಿಡುವುದಿಲ್ಲ ಎಂದು ಸುರೇಶ್​ ಮಂಟಪದಲ್ಲಿಯೇ ಹಲ್​ಚಲ್​ ನಡೆಸಿದ್ದಾನೆ. ಆತನ ಪರಿಸ್ಥಿತಿ ನೋಡಿದ ಮಧುಮಗ ಮದುವೆಯಾಗಲು ನಿರಾಕರಿಸಿದ್ದಾನೆ. ಅತ್ತ ಯುವತಿ ಅವನು ನನಗೆ ಪರಿಚಯವಿಲ್ಲ ಎಂದು ಗೋಗರೆದರೂ ಯುವಕನ ಕುಟುಂಬಸ್ಥರು ಕ್ಯಾರೆ ಎನ್ನಲಿಲ್ಲ.

ಇನ್ನು ಈ ಮದುವೆ ಅರ್ಧಕ್ಕೆ ನಿಂತಿದ್ದು, ಯುವಕ ಸುರೇಶ್​ ವಿರುದ್ಧ ಯುವತಿ ತಂದೆ ದೂರು ಸಲ್ಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರ ಸುರೇಶ್​ನನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details