ಕರ್ನಾಟಕ

karnataka

ETV Bharat / jagte-raho

ಆ ಸಂಬಂಧಕ್ಕಾಗಿ ಬಿತ್ತು ಅಣ್ಣ, ತಂಗಿ ಹೆಣ... ಮದುವೆ ಬಳಿಕ ಸುಳಿಯದ ಮೈದುನನ್ನೇ ಸುಟ್ಟು ಹಾಕಿದ ಅತ್ತಿಗೆ!

ಮೈದುನನ ಜೊತೆ ಅತ್ತಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಮೈದುನನಿಗೆ ಇತ್ತಿಚೇಗೆ ಮದುವೆಯಾಗಿದೆ. ಮದುವೆಯಾದ ಬಳಿಕ ಮೈದುನ ಅತ್ತಿಗೆ ಮನೆ ಬಳಿ ಸುಳಿದಿಲ್ಲ. ಆಮೇಲೆ ನಡೆದಿದ್ದೇ ಡಬಲ್​ ಮರ್ಡರ್​...

By

Published : Jun 20, 2019, 1:19 PM IST

ಅಣ್ಣ, ತಂಗಿ ಹೆಣ

ಈ ಘಟನೆ ಆಂಧ್ರಪ್ರದೇಶ ಕೃಷ್ಣಾ ಜಿಲ್ಲೆಯ ಕಾನೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಖಲೀಲ್​ ತನ್ನ ಅತ್ತಿಗೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಕೆಲ ತಿಂಗಳು ಅತ್ತಿಗೆ-ಮೈದುನನ ಮಧ್ಯೆ ವಿವಾಹೇತರ ಸಂಬಂಧ ಮುಂದುವರಿದಿತ್ತು. ಆದ್ರೆ ಮೂರು ತಿಂಗಳ ಹಿಂದೆ ಖಲಿಲ್​ ಮದುವೆ ಮಾಡಿಕೊಂಡಿದ್ದು, ಬಳಿಕ ತನ್ನ ಅತ್ತಿಗೆ ಮನೆಯ ಹತ್ತಿರ ಸುಳಿಯಲಿಲ್ಲ. ಖಲೀಲ್​ ಮದುವೆ ಬಳಿಕ ವಿವಾಹೇತರ ಸಂಬಂಧಕ್ಕೆ ಗುಡ್​ ಬೈ ಹೇಳಿದ್ದ.

ಇನ್ನು ಮೈದುನ ಖಲೀಲ್​ ಮೇಲೆ ಅತ್ತಿಗೆ ಉದ್ರಿಕ್ತಗೊಂಡಿದ್ದಳು. ಬುಧವಾರದಂದು ಅತ್ತಿಗೆ ಪೆಟ್ರೋಲ್​ ತೆಗೆದುಕೊಂಡು ನೇರ ಖಲೀಲ್​ನ ಕೊಠಡಿಗೆ ತೆರಳಿದ್ದಾಳೆ. ಮೈದುನನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ರೂಂನ ಬಾಗಿಲಿಗೆ ಬೀಗ ಹಾಕಿದ್ದಾಳೆ. ಇನ್ನು ಬೆಂಕಿ ಖಲೀಲ್​ನ್ನು ಆವರಿಸಿದೆ. ಆದ್ರೆ ಅದೇ ರೂಂನಲ್ಲಿ ಖಲೀಲ್​ ಸಹೋದರಿ ಹಜಿನಿ (27) ಸಹ ಇದ್ದಳು. ಅಣ್ಣ ಸಹಾಯಕ್ಕೆ ದೌಡಾಯಿಸಿದ್ದಾಗ ಹಜಿನಿಗೂ ಬೆಂಕಿ ಆವರಿಸಿದೆ.

ಖಲೀಲ್​ ಮತ್ತು ಹಜಿನಿ ಕೂಗುತ್ತಿರುವುದನ್ನು ಕೇಳಿ ತಾಯಿ ಹಾಗೂ ಹೆಂಡತಿ ರೂಂನ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಅಷ್ಟೋತ್ತಿಗಾಗಲೇ ಹಜಿನಿ ದೇಹ ಬೆಂಕಿಗಾಹುತಿಯಾಗಿ ಮಂಚದ ಮೇಲೆ ಮೃತಪಟ್ಟಿದ್ದಳು. ಇನ್ನು ಖಲೀಲ್​ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ಖಲೀಲ್​ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details