ಕರ್ನಾಟಕ

karnataka

ETV Bharat / jagte-raho

ನಿಂತ ಲಾರಿಗೆ ಖಾಸಗಿ ಬಸ್ ಡಿಕ್ಕಿ: ಮೂವರು ಸಾವು, ಮದುವೆ ಗಂಡಿಗೆ ಗಾಯ

ಮದುವೆ ಮುಗಿಸಿಕೊಂಡು ಬಸ್​ನಲ್ಲಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ನಿಂತ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಮದುವೆ ಗಂಡಿಗೆ ಗಾಯಗಳಾಗಿವೆ.

By

Published : May 30, 2019, 2:15 PM IST

ನಿಂತ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದ ಖಾಸಗಿ ಬಸ್

ಕರ್ನೂಲ್(ಆಂಧ್ರಪ್ರದೇಶ)​:ಮದುವೆ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದ ಖಾಸಗಿ ಬಸ್,​ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಮದುವೆ ಗಂಡು ಗಾಯಗೊಂಡ ಘಟನೆ ನಡೆದಿದೆ.

ಆಂಧ್ರಪ್ರದೇಶದ ಕರ್ನೂಲ್​ ಬಳಿಯ ಉಲಿಂದಕೊಂಡ ಹೈವೇಯಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಎಸ್​ಆರ್​ಎಸ್​ ಟ್ರಾವೆಲ್ಸ್​ ಬಸ್​ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್​ ಡ್ರೈವರ್​ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬಸ್​ ಜಖಂಗೊಂಡಿದೆ.

ಲಾರಿಯಲ್ಲಿದ್ದ ಪೈಪ್​ಗಳು ಬಸ್​ನೊಳಗೆ ನುಗ್ಗಿದ್ದು, ಗಾಯಾಳುಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಸ್‌ನಲ್ಲಿ ಮಧುಮಗ ಸೇರಿದಂತೆ 15 ಜನರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಇದೆ.

ಅಪಘಾತದಲ್ಲಿ ಮದುವೆ ಗಂಡು ಸೇರಿದಂತೆ ಐವರು ಗಾಯಗೊಂಡಿದ್ದು, ಗಾಯಾಳುಗಳನ್ನು ಕರ್ನೂಲ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details