ಕರ್ನಾಟಕ

karnataka

ETV Bharat / jagte-raho

ಆಕೆಗಾಗಿ ಸ್ನೇಹಿತರ ನಡುವೆ ಬಿರುಕು... ಎಲ್ಲರ ಕಣ್ಣೆದುರೇ ಆಟೋ ಡ್ರೈವರ್ ಬರ್ಬರ ಹತ್ಯೆ!

ಮಹಿಳೆ ಜೊತೆ ಸಂಬಂಧ ಹೊಂದಿದ ಸ್ನೇಹಿತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್​ ನಗರವನ್ನೇ ಬೆಚ್ಚಿ ಬೀಳಿಸಿದೆ.

By

Published : Jun 27, 2019, 7:02 PM IST

ಆಕೆಗಾಗಿ ಸ್ನೇಹಿತರ ಮಧ್ಯೆ ಬಿರುಕು

ಇಲ್ಲಿನ ಪಂಜಾಗುಟ್ಟ ನಗರದ ಪ್ರಮುಖ ರಸ್ತೆಯಲ್ಲೇ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಅನ್ವರ್​ (32) ಮತ್ತು ರಿಯಾಸತ್​ ಅಲಿ (35) ಇಬ್ಬರು ಸ್ನೇಹಿತರು. ಆಟೋ ಡ್ರೈವರ್​ ಆಗಿ ಇಬ್ಬರು ಕೆಲಸ ಮಾಡುತ್ತಿದ್ದರು. ಇವರು ಮಹಿಳೆಯೊಬ್ಬಳ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗ್ತಿದೆ.

ವಿವಾಹೇತರ ಸಂಬಂಧದ ಬಗ್ಗೆ ಇಬ್ಬರ ಮಧ್ಯೆ ಘರ್ಷಣೆ ನಡೆದಿದೆ. ಅನ್ವರ್​ನನ್ನು ಕೊಲೆ ಮಾಡಲು ರಿಯಾಸತ್​ ಅಲಿ ಸ್ಕೆಚ್​ ಹಾಕಿದ್ದ. ಪಂಜಾಗುಟ್ಟಾ ಆಟೋ ಸ್ಟ್ಯಾಂಡ್​ ಬಳಿ ಮತ್ತೆ ಇಬ್ಬರ ಮಧ್ಯೆ ಜಗಳವಾಗಿದೆ. ರಿಯಾಸತ್​ ಅಲಿ ತಾನು ತಂದಿದ್ದ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವ ಆಗುತ್ತಿದ್ದರೂ ಹಲ್ಲೆಗೊಳಗಾದ ಅನ್ವರ್​ ನೇರವಾಗಿ ಪಕ್ಕದ ಪೊಲೀಸ್​ ಠಾಣೆಗೆ ತೆರಳಿದ್ದಾನೆ. ಪೊಲೀಸರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಿಸದೇ ಅನ್ವರ್​ ಮೃತಪಟ್ಟಿದ್ದಾನೆ.

ಇನ್ನು ರಿಯಾಸತ್​ ಅಲಿ ಕೊಲೆ ಮಾಡಿ ನೇರ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details