ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಪೊಲೀಸ್ ಅಧಿಕಾರಿಗಳ ಹೆಸರು ಹೇಳಿಕೊಂಡು ಗೂಂಡಾಗಿರಿ ನಡೆಸುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಈಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಐಪಿಎಸ್ ಅಧಿಕಾರಿ ಎಂದು ಉದ್ಯಮಿಗೆ ಹಣಕ್ಕಾಗಿ ಬೆದರಿಕೆಯೊಡ್ಡಿದ್ದ ಆರೋಪಿವೋರ್ವ ಈಗ ಸಿದ್ಧಾಪುರ ಪೊಲೀಸರ ಅತಿಥಿಯಾಗಿದ್ದಾನೆ.
ತ್ಯಾಗರಾಜನಗರದ ಭರತ್ ಬಂಧಿತ ನಕಲಿ ಐಪಿಎಸ್ ಅಧಿಕಾರಿ. ಇದೇ ತಿಂಗಳು 14ರಂದು ಲಾಲ್ಬಾಗ್ಗೆ ವಾಯುವಿಹಾರಕ್ಕೆ ಬಂದಿದ್ದ ಉದ್ಯಮಿ ಬೀಮ್ಚಂದ್ ಎಂಬುವರ ಎದುರು ಕೋಲು ಹಿಡಿದುಕೊಂಡು ನಾನು ಐಪಿಎಸ್ ಅಧಿಕಾರಿ. ಈ ಕೂಡಲೇ ಒಂದು ಲಕ್ಷ ನೀಡು. ಇಲ್ಲದಿದ್ದರೆ ನಮ್ಮವರು ನಿತ್ಯ ತೊಂದರೆ ಕೊಡುತ್ತಾರೆ ಎಂದು ಧಮ್ಕಿ ಹಾಕಿದ್ದನಂತೆ.
ಈ ಸಂಬಂಧ ಸಿದ್ಧಾಪುರ ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ಡಿಸಿಪಿ ರೋಹಿಣಿ ಕಟೋಚ್ ಸಪೆಟ್.
ಉದ್ಯಮಿಗಳಿಂದ ಹಣ ವಸೂಲಿ ಮಾಡಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದ ಈತನಿಗೆ ಚಿಕ್ಕಪೇಟೆ, ಎಸ್.ಪಿ.ರೋಡ್ ಮಾರ್ವಾಡಿಗಳೇ ಗುರಿಯಾಗಿದ್ದರು. ಹಣ ಕೊಡದಿದ್ದರೆ ಬೆಟ್ಟಿಂಗ್ ಕೇಸ್ನಲ್ಲಿ ಒಳಗೆ ಹಾಕಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗ್ತಿದೆ.