ಕರ್ನಾಟಕ

karnataka

ETV Bharat / jagte-raho

ಯಮನಾಗಿ ಬಂದ ಕಾರು... ತಿರುಪತಿಗೆ ತೆರಳುತ್ತಿದ್ದ ನವ ವಿವಾಹಿತರ ಸಾವು!

ತಿರುಪತಿ: ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲೇ ನವ ವಿವಾಹಿತರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.

By

Published : Mar 12, 2019, 8:05 PM IST

ಕೃಪೆ: eenadu.net

ಚಿತ್ತೂರು ಜಿಲ್ಲೆಯ ರೆಣಿಗುಂಟಾ ತಾಲೂಕಿನ ಕರಕಂಬಾಡಿ ತಾರಕರಾಮಾನಗರದ ನಿವಾಸಿ ಬಾಲಾಜಿ (22) ಗೆ ಚಂದ್ರಗಿರಿ ತಾಲೂಕಿನ ಕೂಚಿವಾರಿಪಲ್ಲೆ ನಿವಾಸಿ ಸಿ.ಕಾವ್ಯಾ (19) ಜೊತೆ ಫೆಬ್ರವರಿ 7ರಂದು ಮದುವೆಯಾಗಿತ್ತು. ಭಾನುವಾರ ಬಾಲಾಜಿ ತನ್ನ ಹೆಂಡ್ತಿಯೊಡನೆ ಅತ್ತೆ ಮನೆಗೆ ತೆರಳಿದ್ದಾನೆ. ಸೋಮವಾರ ಬೆಳಗ್ಗೆ 8:30ಕ್ಕೆ ಗಂಡ-ಹೆಂಡ್ತಿ ಇಬ್ಬರೂ ತಿರುಪತಿಗೆ ಹೋಗುತ್ತಿರುವಾಗ ಹಿಂದುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

ಕಾರು ಡಿಕ್ಕಿಯಿಂದ ಬಾಲಾಜಿ, ಕಾವ್ಯಾ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿದ ಎರಡೂ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ABOUT THE AUTHOR

...view details