ಕರ್ನಾಟಕ

karnataka

ETV Bharat / jagte-raho

ಮಗಳ ಕೊಟ್ಟ ಅತ್ತೆ, ಕೈ ಹಿಡಿದ ಹೆಂಡ್ತಿಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಭೂಪ!

ವ್ಯಕ್ತಿಯೊಬ್ಬ ಹೊಲದಲ್ಲಿ ನಾರುಗಳನ್ನು ಕಟ್​ ಮಾಡುವ ಹರಿತವಾದ ಆಯುಧವನ್ನ ಹೆಂಡ್ತಿ ಮತ್ತು ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶ ಜನತೆಯನ್ನು ಬೆಚ್ಚಿ ಬೀಳಿಸಿದೆ.

By

Published : Jul 20, 2019, 6:34 PM IST

ಮಗಳು ಕೊಟ್ಟ ಅತ್ತೆ, ಕೈ ಹಿಡಿದ ಹೆಂಡ್ತಿಯನ್ನ ಬರ್ಬರವಾಗಿ ಕೊಚ್ಚಿ ಕೊಂದ ವ್ಯಕ್ತಿ

ಪಶ್ಚಿಮ ಗೋದಾವರಿ: ಹರಿತವಾದ ಆಯುದ್ಧದಿಂದ ಹೆಂಡ್ತಿ ಮತ್ತು ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗೋಪಾಲಪುರಂನ ದೊಂಡಪೂಡಿಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಕಾಂತಾರಾವು ತನ್ನ ಹೆಂಡ್ತಿ ಪುಷ್ಪಲತಾ ಜತೆ ನಿತ್ಯ ಕಿತ್ತಾಡಿಕೊಳ್ಳುತ್ತಿದ್ದರು. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪಗೊಂಡ ಕಾಂತಾರಾವು ಹೆಂಡ್ತಿ ಪುಷ್ಪಲತಾಳನ್ನು ಕೊಯ್ತಾದಿಂದ ಕೊಲೆ ಮಾಡಿದ್ದಾನೆ. ಬಳಿಕ ಮಗಳ ಸಹಾಯಕ್ಕೆ ಬಂದ ಅತ್ತೆ ಲಕ್ಷ್ಮಿಯನ್ನು ಅದೇ ಕೊಯ್ತಾದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಗಂಭೀರವಾಗಿ ಗಾಯಗೊಂಡು ಬಿದ್ದಿರುವ ಮಂಗಾರಾವು

ಇನ್ನು ತನ್ನ ಸಹೋದರಿ ಮತ್ತು ತಾಯಿ ಸಹಾಯಕ್ಕೆ ಧಾವಿಸಿದ ಬಾವಮೈಧುನ ಮಂಗಾರಾವ್​ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಂಗರಾವ್​​ನನ್ನು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details