ಕರ್ನಾಟಕ

karnataka

By

Published : Jul 7, 2022, 4:12 PM IST

Updated : Jul 7, 2022, 4:33 PM IST

ETV Bharat / international

ಜಿ-20: ಭಾರತ-ಚೀನಾ ಮಾತುಕತೆ.. ಗಡಿವಿವಾದ ಚರ್ಚೆ

ಗಡಿವಿವಾದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಬಾಕಿ ಉಳಿದ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು ಎಂದು ಜೈಶಂಕರ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ವಾಸ್ತವ ನಿಯಂತ್ರಣ ರೇಖೆಯಲ್ಲಿ ಎರಡೂ ದೇಶಗಳ ಮಧ್ಯೆ ಉಂಟಾಗಿರುವ ಮಿಲಿಟರಿ ಬಿಕ್ಕಟ್ಟಿನ ಕುರಿತು ಜೈಶಂಕರ್ ಈ ಮಾತು ಹೇಳಿದಂತಿದೆ.

ಜಿ-20: ಭಾರತ-ಚೀನಾ ಮಾತುಕತೆ.. ಗಡಿವಿವಾದ ಚರ್ಚೆ
ಜಿ-20: ಭಾರತ-ಚೀನಾ ಮಾತುಕತೆ.. ಗಡಿವಿವಾದ ಚರ್ಚೆ

ನವದೆಹಲಿ: ವಿದೇಶಾಂಗ ಸಚಿವ ಎಸ್​. ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಗುರುವಾರ ಇಂಡೋನೇಷ್ಯಾದ ಬಾಲಿಯಲ್ಲಿ ಮಾತುಕತೆ ನಡೆಸಿದರು. ಒಂದು ಗಂಟೆ ನಡೆದ ಮಾತುಕತೆಯಲ್ಲಿ ಪೂರ್ವ ಲಡಾಖ್​ನ ಗಡಿ ವಿವಾದ, ಭಾರತೀಯ ವಿದ್ಯಾರ್ಥಿಗಳನ್ನು ಚೀನಾಗೆ ಕಳುಹಿಸುವ ವಿಷಯ ಮತ್ತು ಎರಡೂ ದೇಶಗಳ ನಡುವೆ ನೇರವಿಮಾನ ಸಂಪರ್ಕ ಆರಂಭಿಸುವ ಬಗ್ಗೆ ಚರ್ಚಿಸಲಾಯಿತು.

ಜಿ-20 ಸಮಾವೇಶದ ಅಂಗವಾಗಿ ಜಿ-20 ದೇಶಗಳ ವಿದೇಶಾಂಗ ಸಚಿವರ ಮಧ್ಯೆ ಮಾತುಕತೆಗಳು ನಡೆಯುತ್ತಿವೆ. ಇದೇ ಹಿನ್ನೆಲೆಯಲ್ಲಿ ಭಾರತ ಹಾಗೂ ಚೀನಾ ಸಭೆ ನಡೆದಿದೆ.

ಗಡಿವಿವಾದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಬಾಕಿ ಉಳಿದ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು ಎಂದು ಜೈಶಂಕರ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ವಾಸ್ತವ ನಿಯಂತ್ರಣ ರೇಖೆಯಲ್ಲಿ ಎರಡೂ ದೇಶಗಳ ಮಧ್ಯೆ ಉಂಟಾಗಿರುವ ಮಿಲಿಟರಿ ಬಿಕ್ಕಟ್ಟಿನ ಕುರಿತು ಜೈಶಂಕರ್ ಈ ಮಾತು ಹೇಳಿದಂತಿದೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ಭೇಟಿಯೊಂದಿಗೆ ಬಾಲಿಯಲ್ಲಿ ನನ್ನ ಇಂದಿನ ದಿನ ಆರಂಭವಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆಗಳು ನಡೆದವು. ಗಡಿವಿವಾದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಬಾಕಿ ಉಳಿದ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ:ಆಟವಾಡ್ತಿದ್ದ ಬಾಲಕನ ಮೇಲೆ ಬಿತ್ತು ಯಂತ್ರ.. ಕ್ಷಣಾರ್ಧದಲ್ಲಿ ಹಾರಿಹೋಯ್ತು ಪ್ರಾಣಪಕ್ಷಿ

Last Updated : Jul 7, 2022, 4:33 PM IST

ABOUT THE AUTHOR

...view details