ಕರ್ನಾಟಕ

karnataka

By

Published : Jun 24, 2023, 1:26 PM IST

Updated : Jun 24, 2023, 3:05 PM IST

ETV Bharat / entertainment

'ಹುಟ್ಟುಹಬ್ಬದಂದು ಮನೆಗೆ ಬನ್ನಿ, ಕೇಕ್ ಬದಲು ಬಡಮಕ್ಕಳಿಗೆ ಸಹಾಯ ಮಾಡಿ'‌: ಪ್ರಜ್ವಲ್ ದೇವರಾಜ್

ನನ್ನ ಹುಟ್ಟುಹಬ್ಬದಂದು ನನಗೆ ಖರ್ಚು ಮಾಡುವ ಬದಲು ಬಡಮಕ್ಕಳಿಗೆ ಸಹಾಯ ಮಾಡಿ ಎಂದು ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Actor Prajwal Devaraj
ನಟ‌ ಪ್ರಜ್ವಲ್ ದೇವರಾಜ್

ನಟ‌ ಪ್ರಜ್ವಲ್ ದೇವರಾಜ್

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ‌‌‌ ಮೂಲಕ ಸಿನಿ‌ಪ್ರಿಯರ‌ ಮನ ಗೆದ್ದಿರುವ ನಟ‌ ಪ್ರಜ್ವಲ್ ದೇವರಾಜ್. ತತ್ಸಮ ತದ್ಭವ, ಮಾಫಿಯಾ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಪ್ರಜ್ವಲ್ ದೇವರಾಜ್ ಅಭಿಮಾ‌ನಿಗಳಲ್ಲಿ ಒಂದು ಮ‌ನವಿ ಮಾಡಿದ್ದಾರೆ. ತನಗಾಗಿ ಖರ್ಚು ಮಾಡದೇ ಬಡಮಕ್ಕಳಿಗೆ ಸಹಾಯ ಮಾಡಿ ಎಂದು ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ನಿಮ್ಮೊಂದಿಗೆ ಸಮಯ ಕಳೆಯಬೇಕೆಂದುಕೊಂಡಿದ್ದೇನೆ:ಮುಂದಿನ ಜುಲೈ 4ರಂದು ನಟ ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬ.‌ ಕಳೆದ ಐದು ವರ್ಷಗಳಿಂದ ತಮ್ಮ ಜನ್ಮದಿನ ಆಚರಿಸಿಕೊಳ್ಳದ ಪ್ರಜ್ವಲ್ ‌ದೇವರಾಜ್ ಈ ವರ್ಷ ಬರ್ತ್ ಡೇ ಸೆಲೆಬ್ರೆಟ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳಲ್ಲೊಂದು ಮನವಿ ಮಾಡಿದ್ದಾರೆ. ''ನಿಮ್ಮ (ಅಭಿಮಾನಿಗಳು) ಜೊತೆ ನಮ್ಮ ಮನೆ ಹತ್ತಿರ ಹುಟ್ಟುಹಬ್ಬ ಆಚರಿಸಿಕೊಳ್ಳಲು ತೀರ್ಮಾನಿಸಿದ್ದೇನೆ. ಎಲ್ಲರೂ ಬನ್ನಿ, ಊಟ ಮಾಡಿಕೊಂಡು ಹೋಗಿ. ನಿಮ್ಮ ಜೊತೆ ಹೆಚ್ಚಿನ ಸಮಯ ಕಳೆಯಬೇಕೆಂದುಕೊಂಡಿದ್ದೇನೆ. ಆದರೆ ನಿಮ್ಮೆಲ್ಲರಲ್ಲಿ ನನ್ನದೊಂದು ಮನವಿ, ಯಾರೂ ಹಾರ ಹಾಗೂ ಕೇಕ್‌ ತರಬೇಡಿ. ಅದರ ಬದಲು ಬಡಮಕ್ಕಳಿಗೆ ಹಾಗೂ ಬಡವರಿಗೆ ಆ ಹಣದಲ್ಲಿ ಸಹಾಯ ಮಾಡಿ'' ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಪ್ರಜ್ವಲ್ ಸಿನಿಮಾಗಳು:ಪ್ರಜ್ವಲ್ ದೇವರಾಜ್ ಕೈಯಲ್ಲೀಗ ಮೂರು ಸಿನಿಮಾಗಳಿವೆ. ತತ್ಸಮ ತದ್ಭವ‌ ಹಾಗೂ ಮಾಫಿಯಾ ಚಿತ್ರಗಳಲ್ಲಿ ನಟ ಬ್ಯುಸಿಯಾಗಿದ್ದಾರೆ‌. ನಟಿ ಮೇಘನಾ ರಾಜ್ ಜೊತೆ ನಟಿಸಿರುವ ತತ್ಸಮ ತದ್ಭವ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅದಷ್ಟು ಬೇಗ ಈ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಕೆಲಸ ಮಾಡುತ್ತಿದೆ.

ಇದನ್ನೂ ಓದಿ:Pranitha Subhash Photos: ’’ಹಗಲು ಗನಸು‘‘ ಕಾಣುತ್ತಿರುವ ಎವರ್​ಗ್ರೀನ್​ ಬ್ಯೂಟಿ ಪ್ರಣಿತಾ ಸುಭಾಷ್​

ಪ್ರಜ್ವಲ್ ದೇವರಾಜ್ ಪ್ಯಾನ್​ ಇಂಡಿಯಾ ಸಿನಿಮಾ: ಲವ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಹೀಗೆ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್​ ದೇವರಾಜ್​ ಅವರು ದೊಡ್ಡ ಬ್ರೇಕ್​ ಕೊಡುವ ಸಿನಿಮಾದಲ್ಲಿ ನಟಿಸಿಲ್ಲ. ಮೆಚ್ಚಿನ ನಟನ ಸಿನಿಮಾ ಸೂಪರ್​ ಡೂಪರ್​ ಹಿಟ್​ ಆಗಬೇಕೆಂಬುದು ಅಭಿಮಾನಿಗಳ ಆಶಯ. ಈ ಹಿನ್ನೆಲೆ, ಇತ್ತೀಚೆಗಷ್ಟೇ ನಟನ ಹೊಸ ಸಿನಿಮಾವೊಂದು ಘೋಷಣೆ ಆಗಿದೆ. ಮೊಟ್ಟ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲು ಡೈನಾಮಿಕ್ ಪ್ರಿನ್ಸ್​ ಸಜ್ಜಾಗಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ 5 ಭಾಷೆಗಳಲ್ಲಿ ಮುಂದಿನ ಸಿನಿಮಾವ ನಿರ್ಮಾಣವಾಗಲಿದ್ದು, "ಜಾತರೆ" ಚಿತ್ರದ ಶೀರ್ಷಿಕೆ. ತೆಲುಗು ಚಿತ್ರರಂಗದ ಗಣ್ಯರು ಈ ಚಿತ್ರದ ಜವಾಬ್ದಾರಿ ಹೊತ್ತಿದ್ದಾರೆ. ಉದಯ್ ನಂದನವನಂ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾವನ್ನು ಹೈದರಾಬಾದ್​​ ವರ್ಧಮಾನ್ ಫಿಲಂಸ್, ಲೋಟಸ್ ಎಂಟರ್​ಟೈನ್​​ಮೆಂಟ್ಸ್ ಮೂಲಕ ಗೋವರ್ಧನ್ ರೆಡ್ಡಿ ನಿರ್ಮಿಸಲಿದ್ದಾರೆ. ಆಗಸ್ಟ್​ನಲ್ಲಿ ಚಿತ್ರೀಕರಣ ಶುರು ಮಾಡಿ, 2024ರ ಸಂಕ್ರಾಂತಿ ವೇಳೆಗೆ ಸಿನಿಮಾವನ್ನು ಬಿಡುಗಡೆ ಮಾಡಬೇಕೆಂಬ ಪ್ಲ್ಯಾನ್​ ಅನ್ನು ಚಿತ್ರತಂಡ ಹಾಕಿಕೊಂಡಿದೆ.

ಇದನ್ನೂ ಓದಿ:'ಆದಿಪುರುಷ್​ ವಿಷಯದಲ್ಲಿ ಆ ದೇವರು ಕೂಡ ನಿಮ್ಮನ್ನು ಕ್ಷಮಿಸಲ್ಲ': ಮನೋಜ್ ದೇಸಾಯಿ

Last Updated : Jun 24, 2023, 3:05 PM IST

ABOUT THE AUTHOR

...view details