ಕರ್ನಾಟಕ

karnataka

By

Published : May 14, 2019, 12:24 PM IST

ETV Bharat / city

ಕೊರಟಗೆರೆಯಲ್ಲಿ ಮೂವರು ಅಂದರ್​... ಬೆಳಕಿಗೆ ಬಂದ್ವು ಆರು ಪ್ರಕರಣ

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮೂರು ಬೈಕ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮೂವರು ಚೋರರ ಬಂಧನ

ತುಮಕೂರು:ಮನೆಗಳಲ್ಲಿ ಹಾಗೂ ಬೈಕ್​ಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ಕಳ್ಳರನ್ನು ಕೊರಟಗೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ತುರುವೇಕೆರೆಯ ವೆಂಕಟೇಶ್, ತುಮಕೂರಿನ ಗೋಪಾಲ್ ಹಾಗೂ ಕೃಷ್ಣ ಎಂದು ಗುರುತಿಸಲಾಗಿದೆ. ಈ ಮೂವರು ಕೊರಟಗೆರೆ, ಮಧುಗಿರಿ, ನೆಲಮಂಗಲ, ಯಲ್ಲಾಪುರ ಹಾಗೂ ತೋವಿನಕೆರೆಗಳಲ್ಲಿ ಈ ಮೊದಲು ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಮೂವರು ಚೋರರ ಬಂಧನ

ಇನ್ನು ಬಂಧಿತರಿಂದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮೂರು ಬೈಕ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

For All Latest Updates

TAGGED:

ABOUT THE AUTHOR

...view details