ಕರ್ನಾಟಕ

karnataka

By

Published : May 7, 2022, 10:44 PM IST

Updated : May 7, 2022, 10:50 PM IST

ETV Bharat / city

ಮೇ 16 ರಿಂದಲೇ ಶಾಲಾರಂಭ: ಸಚಿವ ನಾಗೇಶ್

ಮೇ 16 ರಿಂದಲೇ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ತಿಳಿಸಿದರು.

nagesh-spoke
ಸಚಿವ ನಾಗೇಶ್

ಮಂಗಳೂರು:ಮಕ್ಕಳ ಶೈಕ್ಷಣಿಕ ಗುಣಮಟ್ಟ ವೃದ್ಧಿಸಲು, ಕಲಿಕಾ ಚೇತರಿಕೆಯ ದೃಷ್ಟಿಯಿಂದ ಶಾಲೆಯನ್ನು ಮೇ 16ರಿಂದ ಆರಂಭಿಸಲಾಗುವುದು. ರಜಾ ದಿನವನ್ನು 15 ದಿನಗಳಿಗೆ ಇಳಿಕೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಿಕಾ ಚೇತರಿಕೆ ಕುರಿತು ಕೇಂದ್ರದ ಶಿಕ್ಷಣ ಸಚಿವರೂ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಒಂಬತ್ತು ತಿಂಗಳನ್ನು ಮೂರು ಭಾಗಗಳನ್ನಾಗಿ ಮಾಡಿ ಕಲಿಸಲಾಗುವುದು. ಅಕ್ಷರ ಸಂಖ್ಯೆಯ ಜ್ಞಾನ ವೃದ್ಧಿಸುವ ಪ್ರಯತ್ನ, ಸಿಲೆಬಸ್ ಕಡಿಮೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.

ಮೇ 16 ರಿಂದಲೇ ಶಾಲಾರಂಭ: ಸಚಿವ ನಾಗೇಶ್

ಶಾಲಾ ಪಠ್ಯಪುಸ್ತಕಗಳನ್ನು ಶೀಘ್ರ ವಿತರಿಸುವ ವ್ಯವಸ್ಥೆಗಳ ಕುರಿತು ಕ್ರಮ ಕೈಗೊಳ್ಳಲಾಗುವುದು. ಆಂಗ್ಲ ಮಾಧ್ಯಮದೊಂದಿಗೆ ಮಾತೃಭಾಷೆಯ ಶಿಕ್ಷಣಕ್ಕೂ ಒತ್ತು ಕೊಡಬೇಕು ಎಂಬ ದೃಷ್ಟಿಯಿಂದ ಅದಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ. ಆಂಗ್ಲ ಮಾಧ್ಯಮ ಕಲಿಕೆಗೆ ಪೂರಕವಾಗಿ ನುರಿತ ಶಿಕ್ಷಕರನ್ನು ನೇಮಿಸಲಾಗುತ್ತದೆ. ರಾಜ್ಯದಲ್ಲಿ 27 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮಾಡುವ ಮೂಲಕ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದರು.

ಓದಿ:ಅಂತರ್ಜಾತಿ ವಿವಾಹ: ಪತಿ ಜೊತೆ ವಾಸವಿದ್ದ ಯುವತಿಯನ್ನ ಎಳೆದೊಯ್ದ ಕುಟುಂಬಸ್ಥರು!

Last Updated : May 7, 2022, 10:50 PM IST

ABOUT THE AUTHOR

...view details