ಕರ್ನಾಟಕ

karnataka

ETV Bharat / city

ಇನ್ನೂ ಶವಗಳನ್ನು ಹಿಂದಿರುಗಿಸಿಲ್ಲ: ವೈದ್ಯರ ವಿರುದ್ಧ ಮೃತರ ಸಂಬಂಧಿಗಳ ಆಕ್ರೋಶ

ಆಸ್ಪತ್ರೆಗೆ ಶವಗಳು ನೆನ್ನೆ ಸಂಜೆಯೇ ಬಂದಿದ್ದರೂ, ಇದುವರೆಗೆ ನಮ್ಮವರ ಶವಗಳನ್ನು ಮರಳಿಸಿಲ್ಲ ಎಂದು ಧಾರವಾಡ ಕಟ್ಟಡ ಕುಸಿತದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರು ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

By

Published : Mar 22, 2019, 12:23 PM IST

ಮೃತರ ಸಂಬಂಧಿಗಳ ಆಕ್ರೋಶ

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣದಲ್ಲಿ ಈಗಾಗಲೇ ಮೃತರ ಸಂಖ್ಯೆ 15ಕ್ಕೇರಿದೆ. ಈ ನಡುವೆ ದೊರಕಿರುವ ಶವಗಳ ಪೋಸ್ಟ್​ ಮಾರ್ಟಮ್ ಮಾಡುವಲ್ಲಿ ವೈದ್ಯರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ರೊಚ್ಚಿಗೆದ್ದಿದ್ದಾರೆ.

ನಿನ್ನೆ ಸಂಜೆ ಏಳು ಗಂಟೆಗೆ ಬಂದ ಶವಗಳನ್ನಿಟ್ಟುಕೊಂಡು ಇದುವರೆಗೂ ರಿಪೋರ್ಟ್ ನೀಡಿಲ್ಲ. ಅಲ್ಲದೆ ಪೋಸ್ಟ್​ ಮಾರ್ಟಮ್​ ಮುಗಿಸಿ ಶವ ಹಿಂತಿರುಗಿಸಿಲ್ಲ ಎಂದು ಪೊಲೀಸ್ ಮತ್ತು ಜಿಲ್ಲಾಸ್ಪತ್ರೆ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತರ ಸಂಬಂಧಿಗಳ ಆಕ್ರೋಶ

ಈ ವೇಳೆ ಮೃತರ ಸಂಬಂಧಿಕರನ್ನು ಜಿಲ್ಲಾಸ್ಪತ್ರೆ ಹಾಗೂ ಪೊಲೀಸ್ ಸಿಬ್ಬಂದಿ ಸಮಾಧಾನ ಪಡಿಸಲು ಮುಂದಾದರು.

ABOUT THE AUTHOR

...view details