ಕರ್ನಾಟಕ

karnataka

By

Published : Dec 10, 2021, 6:58 PM IST

ETV Bharat / city

ಜನ ಪ್ರತಿನಿಧಿಗಳಿಂದ ಹಕ್ಕು ಚಲಾವಣೆ : ಟ್ರಾಕ್ಟರ್​ನಲ್ಲಿ ಬಂದು ಮತದಾನ ಮಾಡಿದ ರೇಣುಕಾಚಾರ್ಯ

ಶಾಸಕ ಎಂಪಿ ರೇಣುಕಾಚಾರ್ಯ ಒಂದಿಲ್ಲ ಒಂದ್ರೀತಿ ಸುದ್ದಿಯಲ್ಲಿರ್ತಾರೆ. ಇವತ್ತು ಪರಿಷತ್‌ ಚುನಾವಣೆ ಮತದಾನ ಮಾಡಲು ವಿಭಿನ್ನವಾಗಿ ಮತಗಟ್ಟೆಗೆ ಬಂದು ಗಮನ ಸೆಳೆದರು..

davanagere-mlc-election-voting
ವಿಧಾನ ಪರಿಷತ್​ ಚುನಾವಣೆ

ದಾವಣಗೆರೆ :ವಿಧಾನ ಪರಿಷತ್ ಚುನಾವಣೆಯ ಮತದಾನ ಹಿನ್ನೆಲೆ ಜಿಲ್ಲೆಯ ಜನಪ್ರತಿನಿದಿಗಳು ತಮ್ಮ ಹಕ್ಕು ಚಲಾಯಿಸಿದ್ರು.‌ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಟ್ರ್ಯಾಕ್ಟರ್‌ನಲ್ಲಿ ಮತಗಟ್ಟೆಗೆ ಬಂದರು. ಹೊನ್ನಾಳಿ ನಗರದ ಪುರಸಭೆಯಲ್ಲಿರುವ ಮತಘಟ್ಟೆಯಲ್ಲಿ ಪುರಸಭೆಯ 14 ಜನ ಸದಸ್ಯರೊಂದಿಗೆ ಹಕ್ಕು ಚಲಾಯಿಸಿದರು.

ಟ್ರಾಕ್ಟರ್​ನಲ್ಲಿ ಬಂದು ಮತದಾನ ಮಾಡಿದ ಎಂ ಪಿ ರೇಣುಕಾಚಾರ್ಯ..

ದಾವಣಗೆರೆ ಮಹಾನಗರ ಪಾಲಿಕೆಗೆ ಆಗಮಿಸಿದ ಸಂಸದ ಜಿ ಎಂ ಸಿದ್ದೇಶ್ವರ್ ಪಾಲಿಕೆಯ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿದರು. ಇದಲ್ಲದೆ ಹಾಲಿ ಪರಿಷತ್ ಸದಸ್ಯರಾದ ತೇಜಸ್ವಿನಿ ಗೌಡ ಹಾಗೂ ಆರ್.ಶಂಕರ್ ಕೂಡ ದಾವಣಗೆರೆ ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಜನಪ್ರತಿನಿಧಿಗಳಿಂದ ಹಕ್ಕು ಚಲಾವಣೆ

ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕೂಡ ತಮ್ಮ ಕಾಂಗ್ರೆಸ್ ಪಾಲಿಕೆ ಸದಸ್ಯರೊಂದಿಗೆ ಮಹಾನಗರ ಪಾಲಿಕೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ABOUT THE AUTHOR

...view details