ಕರ್ನಾಟಕ

karnataka

By

Published : Sep 26, 2020, 4:06 PM IST

ETV Bharat / city

ವೆಲ್ಡಿಂಗ್​ ಮಾಡುವಾಗ ಸಿಡಿದ ಪೆಟ್ರೋಲ್ ಟ್ಯಾಂಕ್.. ಓರ್ವ ಕಾರ್ಮಿಕ ಸಾವು, ಇಬ್ಬರಿಗೆ ಗಂಭೀರ ಗಾಯ

ಗಂಭೀರ ಗಾಯಗೊಂಡ ಇಬ್ಬರನ್ನು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದಾರೆ..

petrol-tank-blast-while-doing-welding-in-anekal
ವೆಲ್ಡಿಂಗ್​ ಮಾಡುವಾಗ ಸಿಡಿದ ಪೆಟ್ರೋಲ್ ಟ್ಯಾಂಕ್

ಆನೇಕಲ್ :ಪೆಟ್ರೋಲ್ ಟ್ಯಾಂಕ್​​ ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಟ್ಯಾಂಕ್ ಸಿಡಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಎಲೆಕ್ಟ್ರಾನಿಕ್ ಸಿಟಿ ಸಮೀಪದ ವಿಟ್ಟಸಂದ್ರದ ಬಳಿ ಪೆಟ್ರೋಲ್ ಟ್ಯಾಂಕ್​ನಲ್ಲಿ ಐದಾರು ಲೀಟರ್ ಪೆಟ್ರೋಲ್ ಇದ್ದರೂ ಮುಂಜಾಗ್ರತೆ ವಹಿಸದೆ ವಿದ್ಯುತ್ ಸಂಪರ್ಕದಿಂದ ವೆಲ್ಡಿಂಗ್ ಕಾರ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಟ್ಯಾಂಕರ್ ಸಿಡಿದಿದೆ. ಘಟನೆಯಲ್ಲಿ ಗೌರಿ ಶಂಕರ್ ಎಂಬುವರು ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ ಇಬ್ಬರನ್ನು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದಾರೆ.

For All Latest Updates

TAGGED:

ABOUT THE AUTHOR

...view details