ಕರ್ನಾಟಕ

karnataka

By

Published : May 15, 2022, 12:06 PM IST

ETV Bharat / city

ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು ; ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಹೇಳಿಕೆ

ಗೋವಾದ ಎಲ್ಲೆಡೆ ಕನ್ನಡಿಗರು ದಾದಾಗಿರಿ ಪ್ರದರ್ಶಿಸುತ್ತಿದ್ದಾರೆ. ಗೋವಾ ಇದು ನಿಮ್ಮ ತಂದೆಯ ಆಸ್ತಿ ಅಲ್ಲ, ನಮ್ಮ ತಂದೆಯ ಆಸ್ತಿ. ರಾಜಕೀಯ ಲಾಭಕ್ಕಾಗಿ ನೀವು ನಮ್ಮ ಹಬ್ಬಗಳ ಆಚರಣೆಯಲ್ಲೂ ಮಧ್ಯಪ್ರವೇಶ ಮಾಡುತ್ತೀರಿ ಎಂದು ರೆವಲ್ಯೂಷನರಿ ಗೋವನ್ಸ್ ಪಕ್ಷದ ಅಧ್ಯಕ್ಷ ತುಕಾರಾಂ ಪರಬ್ ವಿವಾದಿತ ಹೇಳಿಕೆ ನೀಡಿದ್ದಾರೆ..

Siddanna Matey, Honorary President of Goa Kannada Sangha
ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ

ಬೆಳಗಾವಿ :ನಾವು ಕರ್ನಾಟಕದ ಕನ್ನಡಿಗರಲ್ಲ. ಗೋವಾ ಕನ್ನಡಿಗರು. ಗೋವಾಗೆ ಹರಿಯುವ ಮಹದಾಯಿ ನೀರನ್ನು ಕರ್ನಾಟಕ ಸರ್ಕಾರ ನಿಲ್ಲಿಸಬಾರದು ಎಂದು ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಹೇಳಿಕೆ ನೀಡಿದ್ದಾರೆ. ಇದು ಗೋವಾ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಮುಂಬರುವ ಗೋವಾದ ಗ್ರಾಮ ಪಂಚಾಯತ್‌ ಚುನಾವಣೆ ಹಿನ್ನೆಲೆ ಗೋವಾದ ಸ್ಥಳೀಯ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಸಿದ್ದಣ್ಣ ಮೇಟಿ, ನಮ್ಮ ಕರ್ಮ ಭೂಮಿ ಗೋವಾ, ಜನ್ಮ ಭೂಮಿ ಕರ್ನಾಟಕ ಆಗಿದೆ. ಗೋವಾ ನಮಗೆ ಅನ್ನ ನೀಡುತ್ತೆ ಅಂದ್ರೆ ನಾವು ಗೋವಾದ ಹೆಸರು ಹೇಳಬೇಕು ಎಂದು ಸ್ಥಳೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಸಿದ್ದಣ್ಣ ಮೇಟಿ ಹೇಳಿಕೆ ನೀಡಿದ್ದಾರೆ.

ಇನ್ನು ಸಿದ್ದಣ್ಣ ಮೇಟಿ ಹೇಳಿಕೆಗೆ ಗೋವಾ ಕನ್ನಡಿಗರಿಂದಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸಿದ್ದಣ್ಣ ಮೇಟಿ ಹೇಳಿಕೆಗೆ ಪ್ರತಿಕ್ರಿಯಿಸಲು ಗೋವಾ ಕನ್ನಡಿಗರು ಹಿಂದೇಟು ಹಾಕಿದ್ದಾರೆ.

ಗೋವಾದಲ್ಲಿ ಸ್ಥಳೀಯರು ವರ್ಸಸ್ ವಲಸಿಗರ ವಾರ್ :ಜೂನ್ ವೇಳೆಗೆ ಗೋವಾದ 196 ಗ್ರಾಪಂ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಗ್ರಾಪಂ ಚುನಾವಣೆಯಲ್ಲಿ ಕನ್ನಡಿಗ ಅಭ್ಯರ್ಥಿಗಳಿಗೆ ಬೆಂಬಲಿಸುತ್ತೇವೆ ಎಂದು ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಹೇಳಿಕೆ ಸ್ಥಳೀಯ ಪಕ್ಷಗಳಿಗೆ ನಡುಕ ತಂದಿದೆ. ಇದಾದ ಬಳಿಕ ಗೋವಾದಲ್ಲಿ ರೆವ್ಯೂಲೇಷನ್ ಗೋವನ್ ಪಕ್ಷ ಹಾಗೂ ಗೋವಾ ಕನ್ನಡಿಗರ ಮಧ್ಯೆ ವಾರ್ ಶುರುವಾಗಿದೆ.

ಈ ವೇಳೆ ರೆವಲ್ಯೂಷನರಿ ಗೋವನ್ಸ್ ಪಕ್ಷದ ಅಧ್ಯಕ್ಷ ತುಕಾರಾಂ ಪರಬ್ ವಿವಾದಿತ ಹೇಳಿಕೆ ನೀಡಿದ್ದು, ಗೋವಾ ಕನ್ನಡಿಗರು ನಮ್ಮ ಸಾಂಪ್ರದಾಯಿಕ ಹಬ್ಬಗಳಲ್ಲಿ ಏಕೆ ಮಧ್ಯಪ್ರವೇಶಿಸುತ್ತೀರಿ? ನೀವು ದುರ್ಗಾ ಪೂಜೆ, ಗಣೇಶ ಉತ್ಸವದಲ್ಲಿ ಭಾಗವಹಿಸುತ್ತೀರಿ.. ರಾಜಕೀಯ ಲಾಭಕ್ಕಾಗಿ ಗೋವಾ ಕನ್ನಡಿಗರು ನಮ್ಮ ಹಬ್ಬಗಳಲ್ಲಿ ಭಾಗಿಯಾಗ್ತಿದ್ದಾರೆ. ಕನ್ನಡಿಗರು ಗೋವಾವನ್ನು ‌ತಮ್ಮ ತಂದೆಯ ಆಸ್ತಿ ಎಂದು ಭಾವಿಸಿದ್ದಾರೆ. ಗೋವಾದ ಎಲ್ಲೆಡೆ ಕನ್ನಡಿಗರು ದಾದಾಗಿರಿ ಪ್ರದರ್ಶಿಸುತ್ತಿದ್ದಾರೆ.

ಇದು ನಿಮ್ಮ ತಂದೆಯ ಆಸ್ತಿ ಅಲ್ಲ, ನಮ್ಮ ತಂದೆಯ ಆಸ್ತಿ. ನೀವು ನಮ್ಮ ಹಬ್ಬಗಳ ಆಚರಣೆಯಲ್ಲೂ ಮಧ್ಯಪ್ರವೇಶ ಮಾಡುತ್ತೀರಿ. ರಾಜಕೀಯ ಲಾಭಕ್ಕಾಗಿ ದುರ್ಗಾ ಪೂಜೆ, ಗಣೇಶ ಉತ್ಸವದಲ್ಲಿ ಭಾಗಿಯಾಗುತ್ತೀರಿ ಎನ್ನುವ ಮೂಲಕ ಹಿಂದೂ ಸಮಾರಂಭಗಳಲ್ಲಿ ಕನ್ನಡಿಗರು ಭಾಗವಹಿಸುವುದಕ್ಕೂ ರೆವಲ್ಯೂಷನರಿ ಗೋವನ್ಸ್ ಪಕ್ಷದ ಅಧ್ಯಕ್ಷ ತುಕಾರಾಂ ಪರಬ್ ಆಕ್ಷೇಪಿಸಿದ್ದಾರೆ.

ಇದಲ್ಲದೇ ನಾವು ನಿಮಗೆ 'ಅಕ್ರಮ ವಲಸಿಗರು' ಎಂದು ಹೇಳಲು ಪ್ರಚೋದಿಸುತ್ತೀರಿ ಎಂದು ಸ್ಥಳೀಯ ವಾಹಿನಿ ಸಂದರ್ಶನದಲ್ಲಿ ರೆವಲ್ಯೂಷನರಿ ಗೋವನ್ಸ್ ಪರಬ್ ಅಧ್ಯಕ್ಷ ತುಕಾರಾಂ ಪರಬ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಗ್ಯಾನವಾಪಿ ಮಸೀದಿ ವಿವಾದ: ಮೊದಲ ದಿನದ ಸರ್ವೇಯಲ್ಲಿ 3 ಕೊಠಡಿಗಳ ಚಿತ್ರೀಕರಣ, ನಾಳೆಯೂ ಮುಂದುವರಿಕೆ

ABOUT THE AUTHOR

...view details