ಕರ್ನಾಟಕ

karnataka

ETV Bharat / city

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶ ಒಡೆಯುವ ಉದ್ದೇಶವಿದೆ : ವಕೀಲ ಎಂ. ಜಿರ್ಲಿ

ದೇಶವನ್ನು ಇಬ್ಬಾಗ ಮಾಡುವ ಮನಸ್ಥಿತಿಯಿಂದ ಕಾಂಗ್ರೆಸ್ ಹೊರಬರಬೇಕು. ನೆಹರೂ ಅವತ್ತು ಮಾಡಿರುವ ತಪ್ಪನ್ನು ಈಗಿನ ಕಾಂಗ್ರೆಸ್ ಪಕ್ಷ ಪುನರಾವರ್ತನೆ ಮಾಡುತ್ತಿದ್ದು ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಮುಖಂಡ ಎಂ. ಜಿರ್ಲಿ ವಾಗ್ದಾಳಿ

By

Published : Apr 3, 2019, 7:57 PM IST

ಜಿರ್ಲಿ

ಬೆಳಗಾವಿ :ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ದೇಶದ ಸಮಗ್ರತೆಗೆ ಧಕ್ಕೆ ತರುವಂತಹ ಅಂಶಗಳನ್ನು ಒಳಗೊಂಡಿದ್ದು, ಇದರಿಂದ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಏನೆಂದು ಅರ್ಥವಾಗುತ್ತದೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ಎಂ. ಜಿರ್ಲಿ ಹೇಳಿದ್ದಾರೆ.

ಇಂದು ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ಇಬ್ಬಾಗ ಮಾಡುವ ಮನಸ್ಥಿತಿಯಿಂದ ಕಾಂಗ್ರೆಸ್ ಹೊರಬರಬೇಕು. ನೆಹರೂ ಅವತ್ತು ಮಾಡಿರುವ ತಪ್ಪನ್ನು ಈಗಿನ ಕಾಂಗ್ರೆಸ್ ಪಕ್ಷ ಪುನರಾವರ್ತನೆ ಮಾಡುತ್ತಿದ್ದು ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

ವಕೀಲ ಎಂ. ಜಿರ್ಲಿ

ಜಮ್ಮು ಕಾಶ್ಮೀರಕ್ಕೆ ನೀಡಿದ ಪ್ರತ್ಯೇಕ ಸ್ಥಾನಮಾನ ಕಾಂಗ್ರೆಸ್ ಬೆಂಬಲಿಸಿದೆ. ಮೋದಿ ಸರ್ಕಾರ ಸೈನ್ಯಕ್ಕೆ ನೀಡಿರುವ ಸ್ವಾತಂತ್ರ್ಯವನ್ನು ವಾಪಸ್ ಪಡೆಯುತ್ತೇವೆ ಎಂಬುದು ದೇಶ ದ್ರೋಹದ ಮಾರ್ಗ. ಇದರಿಂದ ಕಾಂಗ್ರೆಸ್ ಮತ್ತೆ ಉಗ್ರಗಾಮಿಗಳ ಬೆಂಬಲಕ್ಕೆ ನಿಂತಂತಾಗಿದೆ. ಮೋದಿ ಸರ್ಕಾರ ದೇಶದ ಅಭಿವೃದ್ದಿ ಹಾಗೂ ಭದ್ರತೆಗೆ ಹೆಚ್ಚು ಒತ್ತು ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಮತ್ತೆ ಪ್ರಧಾನಿ ಆಗುವುದರಲ್ಲಿ ಅನುಮಾನವಿಲ್ಲ ಎಂದರು.

ABOUT THE AUTHOR

...view details