ಕರ್ನಾಟಕ

karnataka

By

Published : Sep 12, 2019, 7:35 PM IST

ETV Bharat / business

'ಐನ್‌ಸ್ಟೈನ್' ಗುರುತ್ವ ಶೋಧಿಸಿದ್ರೆ 'ನ್ಯೂಟನ್ ಏನ್ಮಾಡಿದ್ರು? ಗೋಯಲ್​ ಕಾಲೆಳೆದ ನೆಟ್ಟಿಗರು

ದೆಹಲಿಯ ವಾಣಿಜ್ಯ ಮಂಡಳಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೀಯೂಷ್​ ಗೋಯಲ್, ಟಿವಿಯಲ್ಲಿ ಕಂಡುಬರುವ ಲೆಕ್ಕಾಚಾರಕ್ಕೆ ಗಮನ ಕೊಡದಂತೆ ಜನರಿಗೆ ಸಲಹೆ ನೀಡಿದರು. ನೀವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನೋಡುತ್ತಿದ್ದರೆ, ದೇಶವು ಶೇ 12ರಷ್ಟು ಬೆಳವಣಿಗೆ ದರದಲ್ಲಿ ಸಾಗಬೇಕಾಗುತ್ತದೆ. ಇಂದು ಆರ್ಥಿಕ ವೃದ್ದಿದರ ಶೇ 6 ರಷ್ಟಿದೆ ಎಂದು ಹೇಳಿದ್ದರು.

ಸಾಂದರ್ಭಿಕ ಚಿತ್ರ

ನವದೆಹಲಿ:ಮಂದಗತಿಯ ಆರ್ಥಿಕತೆಯ ಪರಿಣಾಮ ಆಟೋಮೊಬೈಲ್​ ಉದ್ಯಮದ ಬೆಳವಣಿಗೆ ಕುಸಿತಕ್ಕೆ ಓಲಾ, ಉಬರ್ ಕಾರಣವೆಂದು ಹೇಳಿಕೆ ನೀಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬೆನ್ನಲ್ಲೇ ಕೇಂದ್ರ ಸಚಿವ ಪೀಯೂಷ್​ ಗೋಯಲ್​ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗುತ್ತಿದ್ದಾರೆ.

ದೆಹಲಿಯ ವಾಣಿಜ್ಯ ಮಂಡಳಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋಯಲ್, ಟಿವಿಯಲ್ಲಿ ಕಂಡುಬರುವ ಲೆಕ್ಕಾಚಾರಕ್ಕೆ ಗಮನ ಕೊಡದಂತೆ ಜನರಿಗೆ ಸಲಹೆ ನೀಡಿದರು. ನೀವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನೋಡುತ್ತಿದ್ದರೆ. ದೇಶವು ಶೇ 12ರಷ್ಟು ಬೆಳವಣಿಗೆ ದರದಲ್ಲಿ ಸಾಗಬೇಕಾಗುತ್ತದೆ. ಇಂದು ಅದು ಶೇ 6 ರಷ್ಟಿದೆ ಎಂದು ಹೇಳಿದ್ದರು.

ಆ ಗಣಿತವನ್ನು ಎಳೆದು ತರಲು ಹೋಗಬೇಡಿ. ಐನ್‌ಸ್ಟೈನ್‌ಗೆ ಗುರುತ್ವಾಕರ್ಷಣೆಯನ್ನು ಕಂಡುಹಿಡಿಯಲು ಆ ಗಣಿತ ಎಂದಿಗೂ ಸಹಾಯ ಮಾಡಿಲ್ಲ. ನೀವು ರಚನಾತ್ಮಕ ಸೂತ್ರಗಳಿಂದ ಈ ಹಿಂದಿನ ಜ್ಞಾನದತ್ತ ಹೋದರೆ ಈ ಜಗತ್ತಿನಲ್ಲಿ ಯಾವುದೇ ಹೊಸತನಗಳು ಉಂಟಾಗಬಹುದೆಂದು ನಾನು ಭಾವಿಸುವುದಿಲ್ಲ ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡರು.

ಗುರುತ್ವಾಕರ್ಷಣೆಯನ್ನು ಮೊದಲ ಬಾರಿಗೆ ಪರಿಚಯಿಸಿದ್ದವರು ಸರ್ ಐಸಾಕ್ ನ್ಯೂಟನ್. ಆದರೆ, ಗೋಯಲ್​ ಅವರು ಐನ್​ಸ್ಟೈನ್​ ಕಂಡುಹಿಡಿದ ಎಂದು ಹೇಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನೆಟ್ಟಿಗರು ಟ್ವಿಟ್ಟರ್​ನಲ್ಲಿ ಕೇಂದ್ರ ಸಚಿವರನ್ನು ವ್ಯಂಗ್ಯವಾಡುತ್ತಿದ್ದಾರೆ.

ABOUT THE AUTHOR

...view details