ಕರ್ನಾಟಕ

karnataka

By

Published : Apr 22, 2019, 5:21 PM IST

Updated : Apr 22, 2019, 5:30 PM IST

ETV Bharat / briefs

ಬ್ರಾವೋರನ್ನು ಸಿಂಗಲ್​​​ ರನ್​ಗೆ​ ಬರದಂತೆ ತಡೆದ ಧೋನಿ ನಡೆ ಪ್ರಶ್ನಿಸುವುದಿಲ್ಲ: ಕೋಚ್​​ ಫ್ಲೆಮಿಂಗ್​​

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ತಂಡಕ್ಕೆ ಬೆನ್ನೆಲುಬು ಇದ್ದಂತೆ. ಅವರ ನಿರ್ಧಾರಗಳನ್ನು ನಾವು ಎಂದೂ ಪ್ರಶ್ನೆ ಮಾಡುವುದಿಲ್ಲ ಎಂದು ಸಿಎಸ್‌ಕೆ ಮುಖ್ಯ ತರಬೇತುದಾರ ಸ್ಟಿಫೆನ್‌ ಫ್ಲೇಮಿಂಗ್‌ ಹೇಳಿದ್ದಾರೆ.

coach

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ 19 ಓವರ್​ನಲ್ಲಿ 3 ಸಿಂಗಲ್ ರನ್​ ತೆಗೆದುಕೊಳ್ಳುವ ಅವಕಾಶವಿದ್ದರೂ ಧೋನಿ ಬ್ರಾವೋರನ್ನು ಸಿಂಗಲ್​ಗೆ ಬರದಂತೆ ತಡೆದಿದ್ದಕ್ಕೆ ಧೋನಿಯನ್ನು ನಾನು ಪ್ರಶ್ನಿಸುವುದಿಲ್ಲ ಎಂದು ಸಿಎಸ್​ಕೆ ಕೋಚ್​ ಸ್ಟೆಫನ್ ಫ್ಲೆಮಿಂಗ್‌ ​ ತಿಳಿಸಿದ್ದಾರೆ.

ಭಾನುವಾರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಕೇವಲ ಒಂದು ರನ್​ನಿಂದ ರಾಯಲ್‌ ಚಾಲೆಂಜರ್ಸ್‌ ವಿರುದ್ಧ ಸೋಲನುಭವಿಸಿತ್ತು. ಆದರೆ, ಇದಕ್ಕೂ ಮುನ್ನ 19ನೇ ಓವರ್‌ನಲ್ಲಿ ಧೋನಿ ಮೂರು ಬಾರಿ ಸಿಂಗಲ್‌ ರನ್‌ ತೆಗೆದುಕೊಳ್ಳುವ ಅವಕಾಶವಿದ್ದರೂ ಬ್ರಾವೋರನ್ನು ಸಿಂಗಲ್​ ರನ್​ಗೆ ಬರದಂತೆ ತಡೆದಿದ್ದರು. ಆ ಸಂದರ್ಭದಲ್ಲಿ ಸಿಂಗಲ್​ ತೆಗೆದುಕೊಂಡಿದ್ದರೆ ಗೆಲುವು ಸಾಧ್ಯವಾಗಬಹುದಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಫ್ಲೆಮಿಂಗ್,​ ಧೋನಿ ಒಬ್ಬ ಚೇಸಿಂಗ್​ ಮಾಸ್ಟರ್. ಇನ್ನಿಂಗ್ಸ್​ನ ಕೊನೆಯ ಓವರ್​ಗಳಲ್ಲಿ ಅವರು ಸಿಕ್ಸರ್‌ ಸಿಡಿಸುವ ಮಷಿನ್​ನಂತೆ ಬ್ಯಾಟಿಂಗ್​ ನಡೆಸುತ್ತಾರೆ. ತಂಡದ ನಿರ್ಣಾಯಕ ಘಟ್ಟದಲ್ಲಿ ಗೆಲುವಿಗೆ ಹೆಚ್ಚು ರನ್​ಗಳಿದ್ದಾಗ ಸಿಂಗಲ್​ ಅಥವಾ ಎರಡು ರನ್​ಗಳ ಅಗತ್ಯಕ್ಕಿಂತ ಬೌಂಡರಿ ಹಾಗೂ ಸಿಕ್ಸರ್‌ಗಳ ಅಗತ್ಯ ಹೆಚ್ಚಿರುತ್ತದೆ. ಜೊತೆಗೆ ಹೊಸ ಬ್ಯಾಟ್ಸ್​ಮನ್​ಗಳಿಗೆ ಸ್ಟ್ರೈಕ್​ ನೀಡುವುದು ಸಹ ಆ ಸಮಯದಲ್ಲಿ ಕಷ್ಟವಾಗುತ್ತದೆ. ಈ ನಿರ್ಧಾರದಿಂದ ಧೋನಿ ಲೆಕ್ಕಾಚಾರದ ಆಟಕ್ಕೆ ಮೊರೆ ಹೋಗುತ್ತಾರೆ. ಹಾಗಾಗಿ, ಅವರ ನಿರ್ಧಾರವನ್ನು ನಾವೆಂದೂ ಪ್ರಶ್ನೆ ಮಾಡುದಿಲ್ಲ ಎಂದಿದ್ದಾರೆ.

ಆರ್​ಸಿಬಿ ನೀಡಿದ 162 ರನ್‌ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌ ಕಿಂಗ್ಸ್‌ ಆರಂಭದ ಓವರ್​ನಲ್ಲೇ 2 ವಿಕೆಟ್​ ಕಳೆದುಕೊಂಡಿದ್ದಲ್ಲದೆ, ಪವರ್​ ಪ್ಲೇಯೊಳಗೆ 4 ವಿಕೆಟ್​ ಕಳೆದುಕೊಂಡಿದ್ದರು. ಧೋನಿ ತಮ್ಮ ಏಕಾಂಗಿ ಹೋರಾಟದಿಂದ ಪಂದ್ಯವನ್ನು ರೋಚಕ ಹಂತಕ್ಕೆ ತಂದಿದ್ದು ಖುಷಿಯ ವಿಚಾರ. ಇದಲ್ಲದೆ ಆರ್​ಸಿಬಿ ಪರ ಬೌಲರ್​ಗಳು ಉತ್ತಮ ಪ್ರದರ್ಶನ ತೋರಿದರು. ಜೊತೆಗೆ ವಿಕೆಟ್​ ಕೀಪರ್​ ಪಾರ್ಥಿವ್​ ಪಟೇಲ್​ ಬ್ಯಾಟಿಂಗ್​ ಜೊತೆಗೆ ಕೊನೆಯ ಬಾಲ್​ನಲ್ಲಿ ರನೌಟ್​ ಮಾಡಿ ಉತ್ತಮ ಪ್ರದರ್ಶನ ನೀಡಿದರೆಂದು ಪ್ರಶಂಸಿದರು.

ಕೊನೆಯ ಓವರ್‌ನಲ್ಲಿ 26 ರನ್‌ ಅಗತ್ಯವಿದ್ದ ವೇಳೆ ಧೋನಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್‌ ಸೇರಿದಂತೆ ಒಟ್ಟು 24 ರನ್‌ ಸಿಡಿಸಿದ್ದರು. ಕೊನೆಯ ಎಸೆತದಲ್ಲಿ ಎರಡು ರನ್‌ ಅಗತ್ಯವಿದ್ದಾಗ ಧೋನಿ ದೊಡ್ಡ ಹೊಡೆತದ​ ಚಿಂತೆ ಮಾಡದೆ ಡ್ರೈವ್​ ಮಾಡಲೆತ್ನಿಸಿ ಬಾಲ್​ ಬೀಟ್​ ಮಾಡಿದರು. ಬಾಲ್​ ಕೀಪರ್​ ಕೈಗೆ ಸೇರಿದ್ದರಿಂದ ರನ್​ಔಟ್​ ಆಗಿ ಸಿಎಸ್​ಕೆ ಕೇವಲ ಒಂದು ರನ್​ನಿಂದ ರೋಚಕ ಸೋಲು ಕಂಡಿತು.

Last Updated : Apr 22, 2019, 5:30 PM IST

ABOUT THE AUTHOR

...view details