ಕರ್ನಾಟಕ

karnataka

ETV Bharat / briefs

ಹರಕೆ ತೀರಿಸಲು ಹೋದ ದಂಪತಿ ಜೀವಂತವಾಗಿ ಮನೆ ಸೇರಲಿಲ್ಲ: ಮದುವೆಯಾಗಿ 20 ದಿನ ಕಳೆಯುವ ಮುನ್ನವೇ ಗಂಡ-ಹೆಂಡ್ತಿ ವಿಧಿವಶ!

ಭುವನಗಿರಿ: ಮದುವೆಯಾಗಿ ತಿಂಗಳು ಕಳೆಯುವ ಮುನ್ನವೇ ಆ ದಂಪತಿಯ ಬಾಳಿನಲ್ಲಿ ವಿಧಿ ಆಟವಾಡಿದ್ದಾನೆ. ರಸ್ತೆ ಅಪಘಾತದಲ್ಲಿ ಗಂಡ-ಹೆಂಡ್ತಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

By

Published : Mar 12, 2019, 7:00 PM IST

ಕೃಪೆ: eenadu.net

ತೆಲಂಗಾಣದ ಯಾದಾದ್ರಿ ಜಿಲ್ಲೆಯ ಬ್ರಾಹ್ಮಣಪಲ್ಲಿ ಗ್ರಾಮದ ನಿವಾಸಿ ತೇಜಾಡಿ ನರೇಶ್​ (25), ಹೈದರಾಬಾದ್​ ಗಾಂಧಿ ಆಸ್ಪತ್ರೆಗೆ ಸೇರಿದ 108 ವಾಹನದ ಡ್ರೈವರ್​. ಆತನಿಗೆ ಕೇಸಾರಂ ಗ್ರಾಮದ ಬಲಿಜ ದಿವ್ಯಾ ಜೊತೆ 20 ದಿನಗಳ ಹಿಂದೆ ಮದುವೆಯಾಗಿತ್ತು. ದಿವ್ಯಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ವಾರ್ಷಿಕ ಪರೀಕ್ಷೆ ಹಿನ್ನೆಲೆಯಲ್ಲಿ ತವರು ಮನೆಯಲ್ಲಿ ತಂಗಿದ್ದಳು.

ಭಾನುವಾರ ಹರಕೆ ತೀರಿಸಲು ನರೇಶ್​ ಹೆಂಡ್ತಿ ದಿವ್ಯಾ ಜೊತೆ ಸೇರಿ ಆತ್ಮಕೂರು (ಎಂ) ತಾಲೂಕಿನ ಪಾರುಪಲ್ಲಿ ಗ್ರಾಮದ ಹತ್ತಿರ ವಿರುವ ದೇವಸ್ಥಾನಕ್ಕೆ ತೆರಳಿದ್ದಾರೆ. ರಾತ್ರಿ ಅಲ್ಲೇ ಮಲಗಿ ಸೋಮವಾರ ಬೆಳಗ್ಗೆ ಬೈಕ್​ನಲ್ಲಿ ದಂಪತಿ ಕೇಸಾರಂ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು. ಮಾರ್ಗಮಧ್ಯೆದಲ್ಲಿ ರಸ್ತೆ ಮೇಲೆ ನಿಂತ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಘಟನೆ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details