ಕರ್ನಾಟಕ

karnataka

ETV Bharat / briefs

ರೆಬೆಲ್ ಮಂಜು ವಿರುದ್ಧ ಗೆದ್ದು ಬೀಗಲಿದ್ದಾರೆಯೇ ದೊಡ್ಡ ಗೌಡ್ರ ಮೊಮ್ಮಗ..?

ಲೋಕಸಭಾ ಚುನಾವಣೆಗೆ ಮತದಾನ ಮುಗಿದಿದೆ. ಆದರೆ, ಅಭ್ಯರ್ಥಿಗಳ ಭವಿಷ್ಯವೂ ಮುದ್ರಿತವಾಗಿದೆ. ಯಾರ ಹಣೆಬರಹ ಏನಾಗಿರುತ್ತೋ ಅದು ಮೇ 23ಕ್ಕೆ ನಿರ್ಧಾರವಾಗುತ್ತೆ. ಆದರೆ, ಹಾಸನ ಕ್ಷೇತ್ರದ ಅಭ್ಯರ್ಥಿಗಳು ಯಾವ ಕಡೆಗೆ ಎಷ್ಟೆಷ್ಟು ಮತ ಪ್ರಮಾಣ ಬರುತ್ತೆ ಅನ್ನೋದರ ಕುರಿತಂತೆ ಲೆಕ್ಕಾಚಾರ ಹಾಕ್ತಿದ್ದಾರೆ.

By

Published : May 22, 2019, 4:19 PM IST

ಹಾಸನ

ಹಾಸನ:ಈ ಜಿಲ್ಲೆ ಮಾಜಿ ಪ್ರಧಾನಿ ದೇವೇಗೌಡರ ತವರು. ಆದರೆ, ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಕ್ಷೇತ್ರ ಬಿಟ್ಕೊಟ್ಟು ತುಮಕೂರು ಕಡೆಗೆ ವಲಸೆ ಹೋದರು. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ಯುವ ಮುಖ. ಆದರೆ, ಹಳೆ ಹುಲಿ ಎ.ಮಂಜು ಬಿಜೆಪಿಯಿಂದ ಸ್ಪರ್ಧಿಸಿದ್ರಿಂದ ಕದನ ರಂಗೇರಿತ್ತು. ಈಗ ಮತದಾನದ ಬಳಿಕ ತಮಗೆ ಎಷ್ಟೆಷ್ಟು ಪ್ರಮಾಣದಲ್ಲಿ ಮತ ಬಂದಿವೆ ಅನ್ನೋ ಬಗ್ಗೆ ಲೆಕ್ಕ ನಡೀತಿದೆ...

2014ರಲ್ಲಿ ಎ.ಮಂಜು ಕೈನಿಂದ ಸ್ಪರ್ಧಿಸಿ 4,09,379 ಮತ ಪಡೆದ್ರೇ, ಹೆಚ್‌ಡಿಡಿ 5,09,841 ವೋಟ್‌ ಗಿಟ್ಟಿಸಿದ್ದರು. ಹೆಚ್‌ಡಿಡಿ 1ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು. ಹಾಸನದಲ್ಲಿ 8 ಎಂಎಲ್‌ಎ ಕ್ಷೇತ್ರಗಳಿವೆ. ಹಾಸನ, ಕಡೂರಿನಲ್ಲಿ ಬಿಜೆಪಿ ಎಂಎಲ್‌ಎ ಗಳಿದ್ದಾರೆ. ಇದರ ಜತೆಗೆ ಅರಕಲಗೂಡು, ಬೇಲೂರು, ಸಕಲೇಶಪುರದಲ್ಲೂ ಹೆಚ್ಚು ಮತ ಪಡೆದು 1 ಲಕ್ಷಕ್ಕೂ ಅಧಿಕ ಲೀಡ್‌ನಿಂದ ಗೆಲ್ಲುವ ವಿಶ್ವಾಸ ಎ.ಮಂಜು ಅವರದು. ಆದರೆ, ಜೆಡಿಎಸ್‌ ಎದುರಾಳಿ ಕಾಂಗ್ರೆಸ್‌ ಜತೆಗೆ ಮೈತ್ರಿಯಾಗಿದ್ರಿಂದ 2 ಲಕ್ಷದಿಂದ ಗೆಲ್ಲುವ ವಿಶ್ವಾಸ ಪ್ರಜ್ವಲ್‌ ವ್ಯಕ್ತಪಡಿಸ್ತಿದ್ದಾರೆ.

ಹಾಸನ ಮತ್ತು ಕಡೂರು ಬಿಟ್ರೇ, ಉಳಿದೆಲ್ಲ ಎಂಎಲ್‌ಎ ಕ್ಷೇತ್ರದಲ್ಲೂ ಜೆಡಿಎಸ್‌ ಶಾಸಕರಿದ್ದಾರೆ. ಇವೆಲ್ಲ ಮೈತ್ರಿಗೆ ವರದಾನವಾಗುತ್ತೆ ಅನ್ನೋ ವಿಶ್ವಾಸ ಪ್ರಜ್ವಲ್‌ರದು. ಮೈತ್ರಿ ಮತ್ತು ಬಿಜೆಪಿ ಇಬ್ಬರೂ ಒಕ್ಕಲಿಗ ಅಭ್ಯರ್ಥಿಗಳು. ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ಹೆಚ್ಚಿವೆ.

ಜಾತಿವಾರು ಬಲಾಬಲ :

ಒಟ್ಟು ಮತದಾರರು- 16,49,827 ಲಕ್ಷ

ಒಕ್ಕಲಿಗ - 5 ಲಕ್ಷ

ಲಿಂಗಾಯಿತ - 3 ಲಕ್ಷ

ಎಸ್‌ಸಿ -ಎಸ್‌ಟಿ- 3 ಲಕ್ಷ

ಕುರುಬ- 2 ಲಕ್ಷ

ಮುಸ್ಲಿಂ-2 ಲಕ್ಷ

ಇತರ-1.8 ಲಕ್ಷ

ಕ್ಷೇತ್ರದಲ್ಲಿ ಒಟ್ಟು 16,49,827 ಲಕ್ಷ ಮತದಾರರಿದ್ದಾರೆ. ಒಕ್ಕಲಿಗ ಅಂದಾಜು 5 ಲಕ್ಷ, ಲಿಂಗಾಯಿತ 3, ಎಸ್‌ಸಿ -ಎಸ್‌ಟಿ 3, ಕುರುಬ ಸಮುದಾಯ 2 ಲಕ್ಷ, ಮುಸ್ಲಿಂ 2 ಹಾಗೂ ಇತರ-1.8 ಲಕ್ಷ ಮತದಾರರಿದ್ದಾರೆ. 8 ಎಂಎಲ್‌ಎ ಕ್ಷೇತ್ರಗಳಲ್ಲೂ ಸರಾಸರಿ 1.5 ಲಕ್ಷದಷ್ಟು ಮತ ಚಲಾವಣೆಯಾಗಿವೆ. ಅರಕಲಗೂಡು ಗರಿಷ್ಠ, ಹಾಸನ ಕ್ಷೇತ್ರ ಕನಿಷ್ಠ ಮತದಾನವಾಗಿದೆ.

ಹಾಸನದಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ನಡುವೇ ನೇರ ಹಣಾಹಣಿ

ಮತ ಪ್ರಮಾಣ ಎಲ್ಲೆಲ್ಲಿ, ಎಷ್ಟೆಷ್ಟು ?
ಅರಕಲಗೂಡು-1,78,872 (81.48%)

ಹೊಳೇನರಸೀಪುರ-1,72,561 (81.22%)

ಸಕಲೇಶಪುರ-1,58,625 (80.31%)

ಅರಸೀಕೆರೆ-1,64,822 (78.46%)

ಶ್ರವಣಬೆಳಗೊಳ-1,55,996 (77.44%)

ಬೇಲೂರು-1,46,863 (75.79%)

ಕಡೂರು-1,44,524 (72.72%)

ಹಾಸನ-1,50,956 (69.79%)

ಅರಕಲಗೂಡು ಶೇ. 81.48%, ಹೊಳೇನರಸೀಪುರ 81.22%, ಸಕಲೇಶಪುರ 80.31%, ಅರಸೀಕೆರೆ 78.46%, ಶ್ರವಣಬೆಳಗೊಳ 77.44%, ಬೇಲೂರು 75.79%, ಕಡೂರು 72.72% ಹಾಗೂ ಹಾಸನ ಶೇ. 69.79%ರಷ್ಟು ಮತದಾನವಾಗಿದೆ.

ಅರಕಲಗೂಡಿನಲ್ಲೇ 15 ಸಾವಿರ ಲೀಡ್‌, ಆಲೂರು-ಸಕಲೇಶಪುರ 10, ಅರಸೀಕರೆ 5, ಹಾಸನದಲ್ಲಿ 10 ಸಾವಿರ ಮತಗಳ ಲೀಡ್‌ ಪಡೆದು, ಕಡೂರಿನಲ್ಲಿ 20 ಸಾವಿರ, ಬೇಲೂರಿನಲ್ಲಿ 10 ಸಾವಿರ ಮತಗಳ ಲೀಡ್ ತಮಗೆ ಸಿಗುತ್ತೆ ಎಂಬ ಲೆಕ್ಕ ಬಿಜೆಪಿ ಮುಂದಿಡುತ್ತಿದೆ. ಮೂಲ ಕಾಂಗ್ರೆಸ್ಸಿಗರು ಜೆಡಿಎಸ್‌ ಬಿಟ್ಟು ಬಿಜೆಪಿಗೆ ಮತ ಹಾಕಿದ್ದಾರೆಂಬ ವಿಶ್ವಾಸ ಬಿಜೆಪಿಗಿದೆ. ಒಕ್ಕಲಿಗರ ಪ್ರಾಬಲ್ಯದ ಚನ್ನರಾಯಪಟ್ಟಣ, ಹೊಳೇನರಸೀಪುರ ಸೇರಿ 1 ಲಕ್ಷ ಲೀಡ್‌ ಸಿಕ್ಕುತ್ತೆ, ಅರಕಲಗೂಡು 15 ಸಾವಿರ, ಸಕಲೇಶಪುರ 15, ಅರಸೀಕೆರೆ 20, ಬೇಲೂರಿನಲ್ಲಿ 10 ಸಾವಿರ ತಮಗೆ ಸಿಗುತ್ತೆ ಅಂತಾ ಹೇಳುತ್ತಿದೆ ಮೈತ್ರಿ. ಹಾಸನದಲ್ಲಿ 10 ಸಾವಿರ ಮತಗಳು ಲೀಡ್‌ ಸಿಗುತ್ತೆ. ಕಡೂರಿನಲ್ಲಿ ಮೈತ್ರಿ ಅಲೆ ಕಾರಣ ಪ್ರಜ್ವಲ್‌ ಒಂದೂವರೆ ಲಕ್ಷ ಮತಗಳಿಂದ ಗೆಲ್ಲುವ ಕಾನ್ಫಿಡೆಂಟ್‌ ಭವಾನಿ ರೇವಣ್ಣರಿಗಿದೆ.

ಹೊಳೇನರಸೀಪುರ, ಶ್ರವಣಬೆಳಗೊಳದಲ್ಲಿ ಜೆಡಿಎಸ್‌ ಮುಂದಿದೆಯಂತೆ. ಸಕಲೇಶಪುರ, ಅರಕಲಗೂಡುವಿನಲ್ಲಿ ಬಿಜೆಪಿ ಲೀಡ್ ಪಡೆಯುತ್ತಂತೆ. ಈ ನಾಲ್ಕು ಎಂಎಲ್ಎ ಕ್ಷೇತ್ರಗಳೇ ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿವೆ.

ABOUT THE AUTHOR

...view details