ಕರ್ನಾಟಕ

karnataka

ETV Bharat / briefs

ಬಾವಿಗೆ ಹಾರಿ ಪ್ರಾಣ ಬಿಟ್ಟ ಅಣ್ಣ, ತಮ್ಮ, ತಂಗಿ.....  ಕಾರಣ!?

ಒಡಹುಟ್ಟಿದವರು ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ವನಪರ್ತಿಯಲ್ಲಿ ನಡೆದಿದೆ.

By

Published : May 8, 2019, 8:15 PM IST

ಒಂದೇ ಕುಟುಂಬದ

ವನಪರ್ತಿ:ತೆಲಂಗಾಣದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಪ್ರಾಣಬಿಟ್ಟಿದ್ದಾರೆ.

ವನಪರ್ತಿ ಜಿಲ್ಲೆಯ ಅಮರಚಿಂತ ತಾಲೂಕಿನ ನಂದಿಮಳ್ಳ ಎಕ್ಸ್​ರೋಡ್​ ಗ್ರಾಮದಲ್ಲಿ ಅಣ್ಣ, ತಮ್ಮ, ತಂಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರಂಗಣ್ಣ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆತನ ಮೂರು ಮಕ್ಕಳು ಆತ್ಮಹತ್ಯಗೆ ಶರಣಾಗಿದ್ದಾರೆ.

ರಂಗಣ್ಣನ ಮಕ್ಕಳಾದ ಜ್ಯೋತಿ (16), ರಮೇಶ್​ (19) ಮತ್ತು ಸಂಜು (23) ಕುಟುಂಬ ಸಮಸ್ಯೆಯಿಂದಾಗಿ ಹೊಲದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆ ಬಳಿಕ ಈ ಬಗ್ಗೆ ಸ್ಪಷ್ಟ ತೀರ್ಮಾನ ಹೊರಬರಬೇಕಿದೆ.

ABOUT THE AUTHOR

...view details