ನವದೆಹಲಿ:ದೇಶದೆಲ್ಲೆಡೆ ಈಗ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈಗಾಗಲೇ 2 ಹಂತದ ಮತದಾನವೂ ನಡೆದಿದೆ. ಎಲ್ಲ ಪಕ್ಷಗಳು ಮತದಾರರಿಗೆ ಕಲರ್ಫುಲ್ ಭರವಸೆಗಳಿರುವ ಪ್ರಣಾಳಿಕೆ ರೂಪಿಸಿ ಮತದಾರರ ಮುಂದಿಟ್ಟಿವೆ. ದೆಹಲಿಯ ಮತದಾರರಿಗಾಗಿ ಸಾನ್ಜಿ ವಿರಾಸತ್ ಪಕ್ಷ ಭಿನ್ನ ಭರವಸೆಗಳ ಮೂಲಕ ಮತದಾರರನ್ನ ಸೆಳೆಯುತ್ತಿದೆ.
ಕುಡುಕರಿಗೆ ಶೇ. 50ರ ದರದಲ್ಲಿ ಮದ್ಯ, ಈದ್ ಹಬ್ಬಕ್ಕೆ ಉಚಿತ ಮೇಕೆ.. ದೆಹಲಿಯ SVP ಕಲರ್ಫುಲ್ ಪ್ರಣಾಳಿಕೆ!
ಕುಡುಕರಿಗೆ ಶೇ. 50ರಷ್ಟು ದರದಲ್ಲಿ ಮದ್ಯ, ಮುಸ್ಲಿಮರಿಗಾಗಿ ಈದ್ ಹಬ್ಬಕ್ಕೆ ಮೇಕೆ ಫ್ರೀಯಾಗಿ ಕೊಡ್ತೇವೆ ಅಂತಾ ದೆಹಲಿಯ ಎಸ್ವಿಪಿ ಪ್ರಣಾಳಿಕೆಯಲ್ಲಿ ಮತದಾರರಿಗೆ ಭರವಸೆ ನೀಡಿದೆ.
ಕುಡುಕರಿಗೆ ಶೇ. 50ರಷ್ಟು ದರದಲ್ಲಿ ಮದ್ಯ, ಮುಸ್ಲಿಮರಿಗಾಗಿ ಈದ್ ಹಬ್ಬಕ್ಕೆ ಮೇಕೆ ಫ್ರೀಯಾಗಿ ಕೊಡ್ತೇವೆ ಅಂತಾ ದೆಹಲಿಯ ಎಸ್ವಿಪಿ ಪ್ರಣಾಳಿಕೆಯಲ್ಲಿ ಮತದಾರರಿಗೆ ಭರವಸೆ ನೀಡಿದೆ. ಅಷ್ಟೇ ಅಲ್ಲ, ಪಿಹೆಚ್ಡಿ ವರೆಗೂ ಎಲ್ಲರಿಗೂ ಉಚಿತ ಶಿಕ್ಷಣ, ವಿದ್ಯಾರ್ಥಿಗಳಿಗೆ ಮೆಟ್ರೋ ಮತ್ತು ಬಸ್ಗಳಲ್ಲಿ ಉಚಿತ ಪಾಸ್, ಖಾಸಗಿ ಶಾಲೆಗಳಲ್ಲಿ ಶುಲ್ಕ ವಿನಾಯಿತಿ, ಉಚಿತ ಪಡಿತರ ವಿತರಣೆ ಜತೆಗೆ ಹುಟ್ಟುವ ಪ್ರತಿ ಹೆಣ್ಣು ಮಗುವಿಗೂ 50 ಸಾವಿರ ರೂ. ನೀಡೋದಾಗಿ ಎಸ್ವಿಪಿ ಮತದಾರರಿಗೆ ತನ್ನ ಮ್ಯಾನಿಫೆಸ್ಟೋದಲ್ಲಿ ಭರವಸೆ ನೀಡಿದೆ.
ಈ ಎಲ್ಲಾ ಅಂಶಗಳನ್ನೊಳಗೊಂಡ ಪೋಸ್ಟರ್ಗಳನ್ನ ಎಸ್ವಿಪಿ ಅಭ್ಯರ್ಥಿ ಅಮಿತ್ ಶರ್ಮಾ ತಮ್ಮ ಕ್ಷೇತ್ರದೆಲ್ಲೆಡೆ ಅಂಟಿಸಿದ್ದಾರೆ. ದೆಹಲಿ ಈಶಾನ್ಯ ಕ್ಷೇತ್ರದಿಂದ ಸಾನ್ಜಿ ವಿರಾಸತ್ ಪಕ್ಷದಿಂದ ಅಮಿತ್ ಶರ್ಮಾ ಅಖಾಡಕ್ಕಿಳಿದಿದ್ದಾರೆ. ಮೇ 12ರಂದು ದೇಶದಲ್ಲಿ 6ನೇ ಹಂತದ ಮತದಾನ ನಡೆಯಲಿದೆ. ಅವತ್ತೇ ದೆಹಲಿ 7 ಲೋಕಸಭಾ ಕ್ಷೇತ್ರಗಳಲ್ಲೂ ಮತದಾನ ಇದೆ.: