ಕರ್ನಾಟಕ

karnataka

By

Published : Jun 17, 2021, 3:10 PM IST

ETV Bharat / bharat

ಲವ್​ ಪ್ರಪೋಸ್​ ನಿರಾಕರಣೆ: ಯುವತಿಗೆ ಚಾಕುವಿನಿಂದ ಇರಿದು ಕೊಂದ ಪ್ರೇಮಿ

ತನ್ನ ಪ್ರೀತಿ ನಿರಾಕರಣೆ ಮಾಡಿದ್ದಕ್ಕಾಗಿ ಯುವಕನೋರ್ವ ಚಾಕುವಿನಿಂದ ಹಲ್ಲೆ ಮಾಡಿದ್ದು, ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೇರಳದಲ್ಲಿ ಈ ಪ್ರಕರಣ ನಡೆದಿದೆ.

love proposal in Malappuram
love proposal in Malappuram

ಮಲಪ್ಪುರಂ (ಕೇರಳ) : ಲವ್​ ಪ್ರಪೋಸ್ ನಿರಾಕರಿಸಿದ್ದಕ್ಕೆ ಯುವಕನೋರ್ವ ಚಾಕುವಿನಿಂದ ಇರಿದು ಯುವತಿಯನ್ನು ಕೊಲೆ ಮಾಡಿದ್ದಾನೆ. ಈ ಘಟನೆ ಕೇರಳದಲ್ಲಿ ನಡೆದಿದ್ದು, ಮೃತ ಯುವತಿಯನ್ನ 21 ವರ್ಷದ ದೃಶ್ಯಾ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿರುವ ಯುವತಿಯನ್ನ ಮಲಪ್ಪುರಂ ಎಲನಾಡ್​ನ ನಿವಾಸಿ ಎಂದು ಗುರುತಿಸಲಾಗಿದೆ.

ಪೊಲೀಸರು ಈಗಾಗಲೇ ಆರೋಪಿ ವಿನೇಶ್​ ವಿನೋದ್​ನನ್ನು (21) ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಮೃತ ದೃಶ್ಯಾಳ ಸಹೋದರಿ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 8:30ರ ವೇಳೆಗೆ ಈ ಘಟನೆ ನಡೆದಿದೆ.

ವಿನೇಶ್​ ಯುವತಿಯ ಮನೆಯೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಚಾಕುವಿನಿಂದ ಇರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹಲ್ಲೆ ತಡೆಯಲು ಮುಂದಾದ ದೃಶ್ಯಾಳ ಸಹೋದರಿ ಸಹ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿರಿ: ವಿಧಾನ ಕದನದ ಕಣಕ್ಕಿಳಿದ ಕೇರಳದ ಮೊದಲ ತೃತೀಯ ಲಿಂಗಿ..

ಮೃತ ಯುವತಿ ದೃಶ್ಯಾಳ ತಂದೆ ನಡೆಸುತ್ತಿದ್ದ ಅಂಗಡಿಗೆ ಬುಧವಾರ ರಾತ್ರಿ ಬೆಂಕಿ ಹಚ್ಚಲಾಗಿದ್ದು, ಇದರ ಹಿಂದೆ ವಿನೇಶ್​ ಕೈವಾಡವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details