ಕರ್ನಾಟಕ

karnataka

ETV Bharat / bharat

ಬೈಕ್​ ರೇಸಿಂಗ್​ ವೇಳೆ ಎದುರಿನ ದ್ವಿಚಕ್ರ ವಾಹನಕ್ಕೆ ಡಿಕ್ಕಿ.. ಇಬ್ಬರು ಯುವಕರ ಸಾವು!

ಬೈಕ್​ ರೇಸಿಂಗ್​ ವೇಳೆ ಎದುರಿನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

By

Published : Jun 20, 2022, 9:08 AM IST

killed as bike racing goes wrong in Kerala, Kerala crime news, Thiruvananthapuram bike accident news, ಕೇರಳದಲ್ಲಿ ಬೈಕ್ ರೇಸಿಂಗ್  ವೇಳೆ ಅಪಘಾತ, ಕೇರಳ ಅಪರಾಧ ಸುದ್ದಿ, ತಿರುವನಂತಪುರಂ ಬೈಕ್ ಅಪಘಾತ ಸುದ್ದಿ,
ಬೈಕ್​ ಅಪಘಾತದ ದೃಶ್ಯ

ತಿರುವನಂತಪುರಂ: ಎರಡು ಬೈಕ್​ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ವಿಝಿಂಜಂ ಮುಕ್ಕೋಳದಲ್ಲಿ ನಡೆದಿದೆ. ಮೃತರನ್ನು ಚೌವಾರ ಮೂಲದ ಶರತ್ ಮತ್ತು ವಟ್ಟಿಯೂರ್ಕಾವು ನೆಟ್ಟಯಂ ಮೂಲದ ಮುಹಮ್ಮದ್ ಹ್ಯಾರಿಸ್ ಎಂದು ಗುರುತಿಸಲಾಗಿದೆ.

ಬೈಕ್​ ಅಪಘಾತದ ದೃಶ್ಯ

ಭಾನುವಾರ ಸಂಜೆ (ಜೂನ್ 19) ಮುಕ್ಕೋಳದ ಬೈಪಾಸ್​ನಲ್ಲಿ ಈ ಘಟನೆ ನಡೆದಿದೆ. ಯುವಕರು ರೇಸ್‌ನಲ್ಲಿ ತೊಡಗಿದ್ದ ಸಂದರ್ಭದಲ್ಲಿ ಬೈಕ್‌ಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತು. ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಓದಿ:ಹಿಟ್​ ಅಂಡ್​​ ರನ್​: ನೋಡು-ನೋಡುತ್ತಿದ್ದಂತೆ ವ್ಯಕ್ತಿಗೆ ಗುದ್ದಿ ಕಾರಿನ ಸಮೇತ ಪರಾರಿಯಾದ ಚಾಲಕ!

ಸುದ್ದಿ ತಿಳಿದ ತಕ್ಷಣ ವಿಝಿಂಜಂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಕೈಗೊಂಡರು. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ತಿರುವನಂತಪುರಂ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ರವಾನಿಸಿದರು. ಸದ್ಯ ಅಪಘಾತದ ದೃಶ್ಯ ಮೊಬೈಲ್​ವೊಂದರಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details