ಕರ್ನಾಟಕ

karnataka

By

Published : Sep 26, 2021, 9:58 AM IST

Updated : Sep 26, 2021, 11:32 AM IST

ETV Bharat / bharat

RSS ​ಗೆ ಟಕ್ಕರ್​ ಕೊಡಲು ಮುಂದಾದ ಕಾಂಗ್ರೆಸ್ ​.. ದೇಶಾದ್ಯಂತ Jawahar Bal Manch ಸ್ಥಾಪನೆ

ಸೈದ್ಧಾಂತಿಕವಾಗಿ ಆರ್​ಎಸ್​ಎಸ್​ಅನ್ನು ಮಣಿಸಲು ಕಾಂಗ್ರೆಸ್​ ಮಾಸ್ಟರ್ ಪ್ಲಾನ್ ಮಾಡಿದೆ. ಆರ್​ಎಸ್​ಎಸ್​(RSS)ನ ಬಾಲ ಗೋಕುಲಂ ಮಾದರಿಯಲ್ಲೇ ಜವಾಹರ್ ಬಾಲ್ ಮಂಚ್(Jawahar Bal Manch)​ ಸಂಘಟನೆ ಸ್ಥಾಪಿಸಲು ಮುಂದಾಗಿದೆ.

Jawahar Bal Manch
Jawahar Bal Manch

ನವದೆಹಲಿ: ಆರ್​ಎಸ್​​ಎಸ್ (Rashtriya Swayamsevak Sangh)​ ಬಾಲ ಗೋಕುಲಂನಂತೆಯೇ, ಕಾಂಗ್ರೆಸ್​ ಜವಾಹರ್ ಬಾಲ್ ಮಂಚ್(Jawahar Bal Manch) ಪ್ರಾರಂಭಿಸುವ ಮೂಲಕ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಮುಂದಾಗಿದೆ.

ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಮತ್ತು ಪಕ್ಷದ ಜಾತ್ಯತೀತ ಸಿದ್ಧಾಂತವನ್ನು ಪ್ರಚಾರ ಮಾಡಲು, ಹೊಸ ಪೀಳಿಗೆಯನ್ನು ಆಕರ್ಷಿಸಲು ಕಾಂಗ್ರೆಸ್, 7 ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ಜವಾಹರ್ ಬಾಲ್ ಮಂಚ್ ಎಂಬ ಸಂಘಟನೆಯನ್ನು ಆರಂಭಿಸಿದೆ. ಕೆಪಿಸಿಸಿ (ಕೇರಳ ಪ್ರಾದೇಶಿಕ ಕಾಂಗ್ರೆಸ್ ಕಮಿಟಿ) ಕಳೆದ 15 ವರ್ಷಗಳಿಂದ ಈ ಸಂಘಟನೆಯನ್ನು ನಡೆಸುತ್ತಿದೆ.

ಕೇರಳ ಕಾಂಗ್ರೆಸ್​ ಘಟಕವು ಕಳೆದ 15 ವರ್ಷಗಳಿಂದ ಸಂಘಟನೆಯನ್ನು ನಡೆಸುತ್ತಿದೆ. ಹೊಸದಾಗಿ ರಚಿಸಲಾಗಿರುವ ಜವಾಹರ್ ಬಾಲ್ ಮಂಚ್ ಸಂಘಟನೆಗೆ ಕೇರಳ ಕಾಂಗ್ರೆಸ್ ನಾಯಕ ಜಿ.ವಿ. ಹರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹರಿ, ಕೇರಳ ಕಾಂಗ್ರೆಸ್ ಕಳೆದ 15 ವರ್ಷಗಳಿಂದ ಜವಾಹರ್ ಬಾಲ್​ ಮಂಚ್​ಅನ್ನು ನಡೆಸುತ್ತಿದೆ. ಈವರೆಗೆ ಎರಡೂವರೆ ಲಕ್ಷ ಮಕ್ಕಳಿಗೆ ತರಬೇತಿ ನೀಡಲಾಗಿದೆ. ರಾಜ್ಯಮಟ್ಟದ ಈ ಕಾರ್ಯಕ್ರಮ ಯಶಸ್ಸು ಕಂಡಿದ್ದರಿಂದ, ರಾಷ್ಟ್ರಮಟ್ಟಕ್ಕೂ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುತ್ತಿದೆ.

ಶಿಬಿರಗಳು, ಕಾರ್ಯಾಗಾರಗಳು, ಸೆಮಿನಾರ್‌ಗಳು ಮತ್ತು ದೈಹಿಕ ತರಬೇತಿಯ ಮೂಲಕ ಮಕ್ಕಳಿಗೆ ಕಾಂಗ್ರೆಸ್‌ನ ಸಿದ್ಧಾಂತ ಮತ್ತು ಪಕ್ಷದ ಕೊಡುಗೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: ‘ತಾಲಿಬಾನಿ ಬಿಜೆಪಿ’ ಭಾರತದಲ್ಲಿ ಆಳ್ವಿಕೆ ನಡೆಸಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ

ಮಕ್ಕಳಿಗೆ ತರಬೇತಿ ನೀಡುವ ಆರ್‌ಎಸ್‌ಎಸ್ ಸಂಘಟನೆಗಿಂತ ಜವಾಹರ್ ಬಾಲ್ ಮಂಚ್ ಹೇಗೆ ಭಿನ್ನವಾಗಿರುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೂಲಭೂತ ವ್ಯತ್ಯಾಸವೆಂದರೆ ಜಾತ್ಯತೀತತೆ ಎಂದರು. ಆ್ಯಪ್ ಮೂಲಕ ಮಕ್ಕಳು ಈ ಅಭಿಯಾನಕ್ಕೆ ಆನ್‌ಲೈನ್‌ನಲ್ಲಿ ಸೇರಬಹುದು.

Last Updated : Sep 26, 2021, 11:32 AM IST

ABOUT THE AUTHOR

...view details