ಕರ್ನಾಟಕ

karnataka

ETV Bharat / bharat

ಮುಖ್ಯಮಂತ್ರಿಗೆ ತಣ್ಣಗಾದ, ರುಚಿಯಿಲ್ಲದ ಟೀ ಪೂರೈಕೆ.. ಅಧಿಕಾರಿಗೆ ನೋಟಿಸ್ ಜಾರಿ

ಮುಖ್ಯಮಂತ್ರಿಗೆ ತಣ್ಣಗಾದ ಮತ್ತು ರುಚಿಯಿಲ್ಲದ ಟೀ ಪೂರೈಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬನಿಗೆ ನೋಟಿಸ್ ಜಾರಿ ಮಾಡಲಾಗಿದೆ.

By

Published : Jul 12, 2022, 5:39 PM IST

Updated : Jul 12, 2022, 6:17 PM IST

Tasteless and cold tea to CM Shivraj
Tasteless and cold tea to CM Shivraj

ಛತರ್​​​ಪುರ್​(ಮಧ್ಯಪ್ರದೇಶ):ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್​ ಅವರಿಗೆ ವಿಮಾನ ನಿಲ್ದಾಣದಲ್ಲಿ ರುಚಿಯಿಲ್ಲದ ಮತ್ತು ತಣ್ಣನೆಯ ಟೀ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ಮೂರು ದಿನಗಳಲ್ಲಿ ನೋಟಿಸ್​​ಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.

ನಗರ ಸಂಸ್ಥೆಗಳ ಚುನಾವಣಾ ಪ್ರಚಾರಕ್ಕಾಗಿ ಛತ್ತರ್​ಪುರ್ ಜಿಲ್ಲೆಗೆ ಮುಖ್ಯಮಂತ್ರಿ ಆಗಮಿಸಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ರುಚಿಯಿಲ್ಲದ ಮತ್ತು ತಣ್ಣನೆಯ ಟೀ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಿಡಬ್ಲೂಡಿ ಇಲಾಖೆಯ ಅಧಿಕಾರಿ ರಾಕೇಶ್​ ಕನೌಹಾಗೆ ನೋಟಿಸ್ ನೀಡಲಾಗಿದೆ ಎಂದು ರಾಜನಗರ್​​ ವಿಭಾಗದ ಸಹಾಯಕ ಕಮೀಷನರ್​​ ಡಿ.ಪಿ ದ್ವಿವೇದಿ ತಿಳಿಸಿದ್ದಾರೆ.

ಅಧಿಕಾರಿಗೆ ನೋಟಿಸ್ ಜಾರಿ

ಜುಲೈ 11ರಂದು ಈ ಘಟನೆ ನಡೆದಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್​ ರೇವಾಗೆ ಹೋಗುವ ಸಂದರ್ಭದಲ್ಲಿ ಛತ್ತರ್​ಪುರ್ ಜಿಲ್ಲೆಯ ಖಜುರಾಹೋ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳಲು ಉಳಿದುಕೊಂಡಿದ್ದರು. ಈ ವೇಳೆ ಉಪಹಾರ, ಟೀ ಪೂರೈಕೆ ಮಾಡಲಾಗಿತ್ತು.ಪೂರೈಕೆ ಮಾಡಿರುವ ಟೀ ರುಚಿಯಿಲ್ಲದ ಹಾಗೂ ತಣ್ಣಗಾಗಿತ್ತು.

ಇದನ್ನೂ ಓದಿರಿ:ಗುಜರಾತ್​​ನಲ್ಲಿ ನಕಲಿ IPL​ ಟೂರ್ನಿ: ರಷ್ಯಾ ಟೆಕ್ಕಿಗಳಿಗೆ ಟೋಪಿ; ಖತರ್​ನಾಕ್​ ಗ್ಯಾಂಗ್​ ಬಂಧಿಸಿದ ಪೊಲೀಸ್​

ಮೂರು ದಿನಗಳಲ್ಲಿ ಉತ್ತರಿಸುವಂತೆ ನೋಟಿಸ್​​: ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಮೂರು ದಿನಗಳಲ್ಲಿ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಜೊತೆಗೆ ವಿಐಪಿ ಒಬ್ಬರ ಶಿಷ್ಟಾಚಾರದ ಉಲ್ಲಂಘನೆ ಎಂದು ಉಲ್ಲೇಖ ಮಾಡಲಾಗಿದೆ. ಸೂಕ್ತವಾದ ಕಾರಣ ನೀಡದಿದ್ದರೆ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಈ ಪ್ರಕರಣ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗ್ತಿದ್ದು,ಪ್ರತಿಪಕ್ಷಗಳು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿವೆ.

ನೋಟಿಸ್​ ರದ್ದು:ಅಧಿಕಾರಿಗೆ ಶೋಕಾಸ್ ನೋಟಿಸ್​ ಪ್ರಕರಣ ಹೆಚ್ಚು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ವಾಪಸ್​ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಕಳಪೆ ಟೀ ನೀಡಿದ್ದಕ್ಕಾಗಿ ರಾಕೇಶ್ ಕನ್ಹುವಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ರೋಶಕ್ಕೆ ಕಾರಣವಾದರಿಂದ ಜಿಲ್ಲಾಧಿಕಾರಿ ಸಂದೀಪ್ ಜಿ.ಆರ್ ದ್ವಿವೇದಿ ನೀಡಿದ್ದ ನೋಟಿಸ್ ರದ್ದುಗೊಳಿಸಲಾಗಿದೆ.

Last Updated : Jul 12, 2022, 6:17 PM IST

ABOUT THE AUTHOR

...view details