ಕರ್ನಾಟಕ

karnataka

SPB ನೆನೆದ ಸೂಪರ್ ಸ್ಟಾರ್ ರಜನಿ​....ಬಾಲಸುಬ್ರಹ್ಮಣ್ಯಂ ಹಾಡಿದ ಕೊನೆ ಹಾಡು ರಿಲೀಸ್​!

By

Published : Oct 4, 2021, 8:32 PM IST

ಸುಮಾರು 45 ವರ್ಷಗಳ ಕಾಲ ನನ್ನ ಧ್ವನಿಯಾಗಿ ಬದುಕಿದ್ದ ಎಸ್​​ಪಿಬಿ, ಅಣ್ಣಾಥೆ ಚಿತ್ರದಲ್ಲಿ ನನಗಾಗಿ ಹಾಡಿದರು. ಅವರು ನನಗಾಗಿ ಹಾಡಿರುವ ಕೊನೆಯ ಹಾಡು ಇದಾಗಲಿದೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Rajinikanth
Rajinikanth

ಚೆನ್ನೈ(ತಮಿಳುನಾಡು):ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂಬರುವ ಚಿತ್ರ ‘ಅಣ್ಣಾಥೆ’ ಮೊದಲ ಸಾಂಗ್​ ಇಂದು ಸಂಜೆ ರಿಲೀಸ್​ ಆಗಿದ್ದು, ದಿವಂಗತ ಹಿರಿಯ ಗಾಯಕ ಎಸ್​ಪಿಬಿ ಹಾಡಿರುವ ಕೊನೆಯ ಹಾಡು ಇದಾಗಿದೆ. ಕಳೆದ ಸೆಪ್ಟೆಂಬರ್​​ 25ರಂದು ಈ ಸಾಂಗ್​ ಹಾಡಲಾಗಿದೆ.

ಸನ್​ ಪಿಕ್ಚರ್ಸ್​ ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಜನಿಕಾಂತ್​ ಅಭಿನಯದ 'ಅಣ್ಣಾಥೆ' ಚಿತ್ರದ ಹಾಡು ರಿಲೀಸ್​ ಮಾಡಿರುವುದಾಗಿ ಟ್ವೀಟ್ ಮಾಡಿ ತಿಳಿಸಿದೆ. ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಕೊನೆಯ ಹಾಡು ಇದಾಗಿದ್ದು, ಎಸ್‍ಪಿಬಿಯ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಬೇಕಿತ್ತು, ಆದರೆ, ತಯಾರಕರು ಅದನ್ನು ಬಿಡುಗಡೆ ಮಾಡಿರಲಿಲ್ಲ. ಆದರೆ ಇಂದು ರಿಲೀಸ್ ಮಾಡಲಾಗಿದೆ.

ಇದನ್ನೂ ಓದಿರಿ:'ಸಿನಿಮೀಯ ಸ್ಟೈಲ್'ನಲ್ಲಿ ಬ್ಯಾಂಕ್​ ದರೋಡೆ.. ಕಳ್ಳರ ಕೈಚೆಳಕ ಸಿಸಿಟಿವಿಯಲ್ಲಿ ಸೆರೆ..

SPB ನನೆದ ರಜನಿಕಾಂತ್​

ನಟ ರಜನಿಕಾಂತ್ ಕೂಡ ಈ ಸಂದರ್ಭದಲ್ಲಿ ತಮ್ಮ ಸ್ನೇಹಿತನಾದ ಎಸ್​ಪಿಬಿ ಅವರನ್ನ ನೆನಪಿಸಿಕೊಂಡಿದ್ದು, ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಸುಮಾರು 45 ವರ್ಷಗಳ ಕಾಲ ನನ್ನ ಧ್ವನಿಯಾಗಿ ಬದುಕಿದ್ದ ಎಸ್​​ಪಿಬಿ, ಅಣ್ಣಾಥೆ ಚಿತ್ರದಲ್ಲಿ ನನಗಾಗಿ ಹಾಡಿದರು. ಅವರು ನನಗಾಗಿ ಹಾಡಿರುವ ಕೊನೆಯ ಹಾಡು ಇದಾಗಲಿದೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಅವರ ಧ್ವನಿ ಶಾಶ್ವತವಾಗಿ ಬದುಕುತ್ತದೆ ಎಂದಿದ್ದಾರೆ.

ರಜನಿಕಾಂತ್​ ಅಭಿನಯದ ಅಣ್ಣಾಥೆ ಚಿತ್ರ ನವೆಂಬರ್​ 4ರಂದು ತೆರೆಗೆ ಬರಲಿದ್ದು, ಇದರಲ್ಲಿ ಪ್ರಕಾಶ್​ ರಾಜ್​, ನಯನತಾರಾ, ಕೀರ್ತಿ ಸುರೇಶ್​, ಖುಷ್ಬು ಸೇರಿದಂತೆ ಅನೇಕರು ನಟನೆ ಮಾಡಿದ್ದಾರೆ.

ABOUT THE AUTHOR

...view details