ಕರ್ನಾಟಕ

karnataka

By

Published : Nov 7, 2020, 12:08 PM IST

ETV Bharat / bharat

ತಿಳಿದುಕೊಂಡಿರುವುದೇ ಸಾಕು ಎಂದು ಎಂದಿಗೂ ಯೋಚಿಸಬೇಡಿ: ಜನತೆಗೆ ಪ್ರಧಾನಿ ಸಲಹೆ

ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಹಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಆಗ ಮಾತ್ರ ನಾವು ಯಶಸ್ಸಿನ ಶಿಖರ ಮುಟ್ಟಲು ಸಾಧ್ಯ ಅನ್ನೋ ಮೂಲಕ ದೇಶವಾಸಿಗಳಿಗೆ ಪ್ರಧಾನಿ ಮೋದಿ ಹಲವು ಸಲಹೆಗಳನ್ನು ನೀಡಿದ್ದಾರೆ.

-pm
ಜನತೆಗೆ ಮೋದಿ ಸಲಹೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಸರಣಿ ಟ್ವೀಟ್ ಮಾಡಿದ್ದಾರೆ. ಸಾರ್ವಜನಿಕರ ಶ್ರೇಯೋಭಿವೃದ್ಧಿಗೆ ಹಲವು ಸಲಹೆಗಳನ್ನೂ ನೀಡಿದ್ದಾರೆ.

  • ನಿತ್ಯ ನಾವು ಹಲವು ಸವಾಲುಗಳನ್ನು ಎದುರಿಸುತ್ತಿರುತ್ತೇವೆ.
  • ಸಮಸ್ಯೆ ಬಂತು ಎಂದು ದೂರ ಸರಿಯುವುದು ತರವಲ್ಲ.
  • ಅವುಗಳಿಂದ ನಾವು ಉತ್ತಮ ಪಾಠ ಕಲಿತು, ಅವುಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ.
  • ಜೀವನದಲ್ಲಿ ನಿಮ್ಮನ್ನು ನೀವು ವಿದ್ಯಾರ್ಥಿಯಾಗಿ ಪರಿಗಣಿಸಿ.
  • ನಾವು ತಿಳಿದುಕೊಂಡಿರುವುದಷ್ಟೇ ಸಾಕು ಎಂದು ಎಂದಿಗೂ ಯೋಚಿಸಬೇಡಿ.
  • ನೀವು ಮಾಡಿದ ಸಣ್ಣಪುಟ್ಟ ಸಾಧನೆಗಳನ್ನು ಸಂಭ್ರಮಿಸಿ. ಯಾಕೆಂದರೆ ಆ ಸಾಧನೆಗಳನ್ನು ಹೆಚ್ಚಿನ ಜನರು ಮಾಡಿರಲಾರರು.
  • ಗುಂಪಿನ ಕೆಲಸ ಮಾಡುವಾಗ ಎಲ್ಲರೊಂದಿಗೆ ಬೆರೆಯಿರಿ, ಹಿಂಜರಿದರೆ ನೀವು ಅಲ್ಲಿ ಕಲಿಯಬೇಕಾದುದನ್ನು ಕಳೆದುಕೊಳ್ಳುತ್ತೀರಿ.
  • ನೀವು ಮಾಡುವ ಕೆಲಸದ ಗುಣಮಟ್ಟದಲ್ಲಿ ರಾಜೀಯಾಗಬೇಡಿ.
  • ನೀವು ಮಾಡಿರುವ ಆವಿಷ್ಕಾರಗಳು ಸಾಮೂಹಿಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡಿ.
  • ಎಲ್ಲರ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಿ, ನಂಬಿಕೆ ಉಳಿಸಿಕೊಳ್ಳಿ.
  • ಬದಲಾವಣೆಗೆ ಮುಕ್ತರಾಗಿರಿ, ಬೇರೆಯವರು ಸಲಹೆ ನೀಡಿದಾಗ ಪರಿಶೀಲಿಸಿ ಅಗತ್ಯವಿದ್ದಲ್ಲಿ ಮಾತ್ರ ಅಳವಡಿಸಿಕೊಳ್ಳಿ.

ಬದಲಾವಣೆಗೆ ಮುಕ್ತರಾದಾಗ ಮಾತ್ರ ನೀವು ನಿಮ್ಮನ್ನು ಬದಲಾಯಿಸಿಕೊಳ್ಳಲು ಸಾಧ್ಯ. ಸಾಧನೆ ಮಾಡಬೇಕಾದರೆ ಈ ಮೇಲಿನ ಎಲ್ಲ ಅಂಶಗಳು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ABOUT THE AUTHOR

...view details