ಕರ್ನಾಟಕ

karnataka

By

Published : Jan 29, 2022, 9:17 AM IST

ETV Bharat / bharat

ಕೋವಿಡ್​ ಪರಿಸ್ಥಿತಿ ಕುರಿತು 5 ರಾಜ್ಯಗಳೊಂದಿಗೆ ಇಂದು ಮನ್ಸುಖ್ ಮಾಂಡವಿಯಾ ಪರಿಶೀಲನಾ ಸಭೆ

COVID-19 situation: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಂದು ಐದು ರಾಜ್ಯಗಳೊಂದಿಗೆ ಕೋವಿಡ್​​-19 ಪರಿಸ್ಥಿತಿಯನ್ನು ವಾಸ್ತವಿಕವಾಗಿ ಪರಿಶೀಲಿಸಲಿದ್ದಾರೆ.

Union Health Minister Mansukh Mandaviya
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ

ನವದೆಹಲಿ: ದೇಶದಲ್ಲಿ ಕೋವಿಡ್​​ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಂದು (ಶನಿವಾರ) ಐದು ರಾಜ್ಯಗಳೊಂದಿಗೆ ಕೋವಿಡ್​​-19 ಪರಿಸ್ಥಿತಿ ಕುರಿತು ಪರಿಶೀಲನಾ ಸಭೆ ನಡೆಸಲಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ಬಿಹಾರ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ಒಮಿಕ್ರಾನ್ ರೂಪಾಂತರದ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಸಿದ್ಧತೆಗಳ ಬಗ್ಗೆ ಪರಿಶೀಲಿಸಲಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಶುಕ್ರವಾರ ಮಾಂಡವಿಯಾ ಅವರು ದಕ್ಷಿಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಈ ವೇಳೆ, ಇ-ಸಂಜೀವಿನಿ, ದೂರಸಂಪರ್ಕ, ಮಾನಿಟರಿಂಗ್ ಹೋಂ ಐಸೋಲೇಷನ್ ಮತ್ತು ಕಡಿಮೆ ಪರೀಕ್ಷೆಯನ್ನು ವರದಿ ಮಾಡುವ ರಾಜ್ಯಗಳಲ್ಲಿ ಆರ್‌ಟಿಪಿಸಿಆರ್ ಅನ್ನು ಹೆಚ್ಚಿಸುವ ಕುರಿತು ಒತ್ತು ನೀಡಲು ಸಲಹೆ ನೀಡಿದರು.

ಇಂದಿನ ಉನ್ನತ ಮಟ್ಟದ ಪರಿಶೀಲನಾ ಸಭೆಗೆ ರಾಜ್ಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್ (ಕರ್ನಾಟಕ), ಡಾ. ವೀಣಾ ಜಾರ್ಜ್ (ಕೇರಳ), ಮಾ.ಸುಬ್ರಮಣ್ಯಂ (ತಮಿಳುನಾಡು) ಮತ್ತು ತಣ್ಣೀರು ಹರೀಶ್ ರಾವ್ (ತೆಲಂಗಾಣ) ಭಾಗಿಯಾಗಲಿದ್ದಾರೆ.

ಉತ್ತರದ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಕೋವಿಡ್ ಪರೀಕ್ಷೆ ಮತ್ತು ಲಸಿಕೆ ಡೇಟಾವನ್ನು ಸಕಾಲಿಕವಾಗಿ ಕಳುಹಿಸಲು ಸಲಹೆ ನೀಡಿದರು.

ಜತೆಗೆ ಕೋವಿಡ್​​ ಪರೀಕ್ಷೆ ಕಡಿಮೆಯಾದ ರಾಜ್ಯಗಳಲ್ಲಿ ಪರೀಕ್ಷೆಯನ್ನು ಹೆಚ್ಚಿಸಬೇಕು. ರಾಷ್ಟ್ರೀಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮನೆಯಲ್ಲಿ ಪ್ರತ್ಯೇಕವಾಗಿ ಇರುವವರನ್ನು ಸಮರ್ಥವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಅವರು ಸಲಹೆ ನೀಡಿದರು.

ಇದನ್ನೂ ಓದಿ:ಸೆಲ್ಫ್ ಕೋವಿಡ್ ಟೆಸ್ಟ್ ಕಿಟ್ ಬಳಕೆ: ಐಸಿಎಂಆರ್ ಪೋರ್ಟಲ್​​ನಲ್ಲಿ ಮಾಹಿತಿ ದಾಖಲಿಸುವುದು ಕಡ್ಡಾಯ

For All Latest Updates

TAGGED:

ABOUT THE AUTHOR

...view details