ಗುಂಟೂರು (ಆಂಧ್ರಪ್ರದೇಶ) :ತಾನು ಕೇಳಿದಷ್ಟು ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಮಹಿಳೆಯೋರ್ವಳನ್ನ ಲಾರಿ ಡ್ರೈವರ್ ಎಳೆದೊಯ್ದ ಪರಿಣಾಮ ಆಕೆ ಲಾರಿಯಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಯ್ಡುಪೇಟನ ಜಿಂದಾಲ್ ಬಳಿ ಈ ದಾರುಣ ಘಟನೆ ನಡೆದಿದ್ದು, ಮಹಿಳೆಯೋರ್ವಳು ತನ್ನ ಮಕ್ಕಳೊಂದಿಗೆ ಚಿಲಕಲೂರಿಪೇಟೆಯಿಂದ ಕಸ ಎತ್ತಲು ಮಕ್ಕಳೊಂದಿಗೆ ಲಾರಿವೊಂದರಲ್ಲಿ ಗುಂಟೂರಿಗೆ ಬಂದಿದ್ದಾಳೆ. ಈ ವೇಳೆ ಡ್ರೈವರ್ ಕೇಳಿರುವುದಕ್ಕಿಂತಲೂ ಕಡಿಮೆ ಹಣ ನೀಡಿದ್ದಕ್ಕಾಗಿ ಆಕ್ರೋಶಗೊಂಡಿರುವ ವ್ಯಕ್ತಿ, ಆಕೆಯನ್ನ ಲಾರಿಯಲ್ಲೇ ಎಳೆದೊಯ್ದಿದ್ದಾನೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.