ಕರ್ನಾಟಕ

karnataka

ಕೇಳಿದಷ್ಟು ಹಣ ನೀಡದಕ್ಕೆ ಮಹಿಳೆ ಮೇಲೆ ಲಾರಿ ಹರಿಸಿ ಕೊಂದ ಕಿರಾತಕ ಡ್ರೈವರ್‌!

By

Published : May 20, 2022, 3:32 PM IST

ಮಕ್ಕಳೊಂದಿಗೆ ಚಿಲಕಲೂರಿಪೇಟೆಯಿಂದ ಗುಂಟೂರಿಗೆ ಪ್ರಯಾಣ ಬೆಳೆಸಿದ್ದ ಮಹಿಳೆಯೋರ್ವಳು ಲಾರಿ ಡ್ರೈವರ್ ಕೇಳಿರುವಷ್ಟು ಹಣ ನೀಡಲಿಲ್ಲ. ಇದೇ ಕಾರಣಕ್ಕಾಗಿ ಆಕೆಯ ಮೇಲೆ ಲಾರಿ ಹರಿಸಿದ್ದಾನೆ ಡ್ರೈವರ್‌..

Man dragged woman with lorry
Man dragged woman with lorry

ಗುಂಟೂರು (ಆಂಧ್ರಪ್ರದೇಶ) :ತಾನು ಕೇಳಿದಷ್ಟು ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಮಹಿಳೆಯೋರ್ವಳನ್ನ ಲಾರಿ ಡ್ರೈವರ್​​ ಎಳೆದೊಯ್ದ ಪರಿಣಾಮ ಆಕೆ ಲಾರಿಯಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಳಿದಷ್ಟು ಹಣ ನೀಡದಕ್ಕೆ ಲಾರಿಯಲ್ಲೇ ಮಹಿಳೆ ಎಳೆದೊಯ್ದ ಡ್ರೈವರ್..

ನಾಯ್ಡುಪೇಟನ ಜಿಂದಾಲ್​ ಬಳಿ ಈ ದಾರುಣ ಘಟನೆ ನಡೆದಿದ್ದು, ಮಹಿಳೆಯೋರ್ವಳು ತನ್ನ ಮಕ್ಕಳೊಂದಿಗೆ ಚಿಲಕಲೂರಿಪೇಟೆಯಿಂದ ಕಸ ಎತ್ತಲು ಮಕ್ಕಳೊಂದಿಗೆ ಲಾರಿವೊಂದರಲ್ಲಿ ಗುಂಟೂರಿಗೆ ಬಂದಿದ್ದಾಳೆ. ಈ ವೇಳೆ ಡ್ರೈವರ್​ ಕೇಳಿರುವುದಕ್ಕಿಂತಲೂ ಕಡಿಮೆ ಹಣ ನೀಡಿದ್ದಕ್ಕಾಗಿ ಆಕ್ರೋಶಗೊಂಡಿರುವ ವ್ಯಕ್ತಿ, ಆಕೆಯನ್ನ ಲಾರಿಯಲ್ಲೇ ಎಳೆದೊಯ್ದಿದ್ದಾನೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ:ಶರಣಾಗಲು ಕಾಲಾವಕಾಶ ಕೋರಿ ಸುಪ್ರೀಂಕೋರ್ಟ್‌ ಮೊರೆ ಹೋದ ಸಿಧು

ರಮಣ ಎಂಬ ಮಹಿಳೆ ತನ್ನ ಮಕ್ಕಳೊಂದಿಗೆ ಗುಂಟೂರಿಗೆ ಆಗಮಿಸಿದ್ದು, ಈ ವೇಳೆ ಲಾರಿ ಚಾಲಕನಿಗೆ 300 ರೂ. ಬದಲಿಗೆ 100 ರೂ. ನೀಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಡ್ರೈವರ್​ ಲಾರಿ ಮುಂದಕ್ಕೆ ಓಡಿಸಿದ್ದಾನೆ. ಈ ವೇಳೆ ಮಹಿಳೆ ಲಾರಿಯಡಿ ಬಿದ್ದು ಸಾವನ್ನಪ್ಪಿದ್ದಾಳೆ. ತಾಯಿ ಸಾವನ್ನಪ್ಪಿರುವುದನ್ನ ನೋಡಿರುವ ಮಕ್ಕಳು ಆಕೆಯ ಮೈಮೇಲೆ ಬಿದ್ದು ಗೋಳಾಡಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಚಾಲಕನಿಗೋಸ್ಕರ ಶೋಧಕಾರ್ಯ ಆರಂಭಿಸಿದ್ದಾರೆ.

ABOUT THE AUTHOR

...view details