ಹೈದರಾಬಾದ್(ತೆಲಂಗಾಣ)ಕೆಟಿಆರ್ ಅಂಕಲ್... ಎಂಎಲ್ ಎ ಅಂಕಲ್... ಕಮಿಷನರ್ ಅಂಕಲ್.. ದಯವಿಟ್ಟು ನಮ್ಮನ್ನು ಕಾಪಾಡಿ ಎಂದು ಮಕ್ಕಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಮೆಡ್ಚಲ್ ಮಲ್ಕಜಗಿರಿ ಜಿಲ್ಲೆಯ ಕೊಂಪಲ್ಲಿ ಪುರಸಭೆ ವ್ಯಾಪ್ತಿಯ ಎನ್ ಸಿಎಲ್ ನಾರ್ತ್ ರೆವಿನ್ಯೂ ಕಾಲೋನಿಯಲ್ಲಿ ಹಲವು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು, ವೃದ್ಧರು ಬೀದಿ ನಾಯಿಗಳ ಕಾಟದಿಂದ ಭಯಭೀತರಾಗಿದ್ದಾರೆ. ಅಧಿಕಾರಿಗಳಿಗೆ ಎಷ್ಟು ಬಾರಿ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ಕಾಲೋನಿಯಲ್ಲಿರುವ ಪುಟ್ಟ ಮಕ್ಕಳು ಆತಂಕಕ್ಕೊಳಗಾಗಿದ್ದಾರೆ. ಪರಿಣಾಮ ಬೀದಿ ನಾಯಿಗಳ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ತೆಲಂಗಾಣ ಐಟಿ, ಕೈಗಾರಿಕಾ ಸಚಿವ ಕೆಟಿಆರ್ಗೆ ಮಕ್ಕಳು ಮನವಿ ಮಾಡಿದ್ದಾರೆ.