ಕರ್ನಾಟಕ

karnataka

ಭಾರತ ಯಾವುದೇ ಸವಾಲು ಎದುರಿಸಲು ಸಮರ್ಥವಾಗಿದೆ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

By

Published : Sep 9, 2021, 4:03 PM IST

Updated : Sep 9, 2021, 5:24 PM IST

ರಾಜಸ್ಥಾನದ ಜಲೋರ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ವಿಮಾನಗಳ ತುರ್ತು ಭೂಸ್ಪರ್ಶ ಪ್ರದೇಶವನ್ನು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಇಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಗ್ರತೆ, ಏಕತೆ ಹಾಗು ಸಾರ್ವಭೌಮತೆಯನ್ನು ಸಂರಕ್ಷಿಸಲು ಭಾರತ ಸಮರ್ಥವಿದೆ ಎಂದು ಹೇಳಿದರು.

India is prepared to defend its unity, integrity, sovereignty: Rajnath Singh
ಎಂತಹದ್ದೇ ಸವಾಲು ಎದುರಿಸಲು ಭಾರತ ಸಮರ್ಥವಾಗಿದೆ - ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಜಲೋರ್(ರಾಜಸ್ಥಾನ): ಭಾರತ ತನ್ನ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳುವ ಜೊತೆಗೆ ಯಾವುದೇ ಸವಾಲು ಎದುರಿಸುವ ಸಾಮರ್ಥ್ಯ ಹೊಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ಭಾರತ ಯಾವುದೇ ಸವಾಲು ಎದುರಿಸಲು ಸಮರ್ಥವಾಗಿದೆ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ರಾಜಸ್ಥಾನದ ಜಲೋರ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ವಿಮಾನಗಳ ತುರ್ತು ಭೂಸ್ಪರ್ಶ ಪ್ರದೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದೇಶದ ವಿವಿಧ ಭಾಗಗಳಲ್ಲಿ ವಿಮಾನಗಳ ತುರ್ತು ಭೂಸ್ಪರ್ಶಕ್ಕೆ ಅನುಕೂಲವಾಗುವಂತಹ ಪ್ರದೇಶಗಳು ಹಾಗು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ. ಇಂದು ಉದ್ಘಾಟನೆಗೊಂಡ ಪ್ರದೇಶವು ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಗೆ ಅತ್ಯಂತ ಸಮೀಪದಲ್ಲಿದೆ. ಇದು ದೇಶ ಯಾವುದೇ ಸವಾಲನ್ನು ಎದುರಿಸುವ ಸನ್ನದ್ಧತೆಯನ್ನು ಸೂಚಿಸುತ್ತದೆ ಎಂದು ಮೆಚ್ಚುಗೆ ಸಿಂಗ್ ವ್ಯಕ್ತಪಡಿಸಿದರು.

ಈ ತುರ್ತು ಭೂಸ್ಪರ್ಶ ಪ್ರದೇಶ ಹಾಗೂ ಹೆಲಿಪ್ಯಾಡ್‌ಗಳು ಕೇವಲ ಯುದ್ಧಕ್ಕೆ ಮಾತ್ರ ಬಳಕೆಯಾಗದು. ಬದಲಾಗಿ ಪ್ರಾಕೃತಿಕ ವಿಪತ್ತು ಸಂಭವಿಸುವ ಸಂದರ್ಭದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗಾಗಿಯೂ ತುರ್ತು ಉಪಯೋಗಕ್ಕೆ ಬರಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದೇಶದ ವಿವಿಧ ಭಾಗಗಳಲ್ಲಿ ವಿಮಾನಗಳ ತುರ್ತು ಭೂಸ್ಪರ್ಶಕ್ಕೆ ಅನುಕೂಲವಾಗುವಂತಹ ಪ್ರದೇಶಗಳು ಹಾಗು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ.

ಇದನ್ನೂ ಓದಿ: IAF ಫೈಟರ್​ ಜೆಟ್​ ತುರ್ತು ಲ್ಯಾಂಡಿಂಗ್​: ವಿಶೇಷ ಹೆದ್ದಾರಿ ಉದ್ಘಾಟಿಸಿದ ಕೇಂದ್ರ ಸಚಿವರು

Last Updated : Sep 9, 2021, 5:24 PM IST

ABOUT THE AUTHOR

...view details