ಚೆನ್ನೈ: ತಮಿಳುನಾಡು ಮತ್ತು ವಾರಾಣಸಿ ನಡುವಣ ಸಾಂಸ್ಕೃತಿಕ ಮತ್ತು ನಾಗರಿಕತೆಯ ಬಾಂಧವ್ಯವನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರವು 'ಕಾಶಿ-ತಮಿಳು ಸಂಗಮ' ಘೋಷಿಸಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ (IIT ) ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಗಳು ಈ ಮೆಗಾ ಈವೆಂಟ್ನ ಹೋಸ್ಟಿಂಗ್ ಪಾಲುದಾರುಗಳಾಗಿ ಕಾರ್ಯ ನಿರ್ವಹಿಸಲಿವೆ.
ಈ ಪ್ರಾಯೋಜಕತ್ವದಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೂಪಿಸಿರುವ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಚೌಕಟ್ಟಿನಡಿ ಈ 'ಕಾಶಿ-ತಮಿಳು ಸಂಗಮ'ವು ನವೆಂಬರ್ 16ರಿಂದ ಡಿಸೆಂಬರ್ 20 ರ ವರೆಗೆ ಕಾಶಿಯಲ್ಲಿ ಜರುಗಲಿದೆ.
ವಿವಿಧ ವರ್ಗದ 12 ಗುಂಪು ರಚನೆ : ಶಿಕ್ಷಣ, ಅಧ್ಯಾತ್ಮಿಕತೆ, ತತ್ವಶಾಸ್ತ್ರ, ವ್ಯಾಪಾರ ಮತ್ತು ವಾಣಿಜ್ಯ, ಕೃಷಿ, ಉದ್ಯಮಶೀಲತೆ, ಕಲೆ ಮತ್ತು ಕುಶಲಕರ್ಮಿಗಳು ಸೇರಿದಂತೆ ತಮಿಳುನಾಡಿನ ನಾನಾ ವರ್ಗಗಳ 12 ಗುಂಪು ಕ್ಲಸ್ಟರ್ಗಳನ್ನು ರಚಿಸಿದ್ದು, 2400 ಕ್ಕೂ ಹೆಚ್ಚು ತಮಿಳುನಾಡಿನ ವಿಶೇಷ ಅತಿಥಿಗಳು ಕಾಶಿಗೆ ಭೇಟಿ ನೀಡಲಿದ್ದಾರೆ.