ಅಗರ್ತಲಾ(ತ್ರಿಪುರಾ):ಸ್ವಾತಂತ್ರ್ಯ ದಿನಕ್ಕೆ ಭಾರತ ಸಜ್ಜುಗೊಂಡಿರುವ ಸಂದರ್ಭದಲ್ಲೇ, ಅನುಮಾನಾಸ್ಪದವಾಗಿ ಗಡಿ ಪ್ರವೇಶಿಸಿದ್ದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಗರ್ತಲಾದ ಮಹಾರಾಜ ಬೀರ್ ಬಿಕ್ರಂ ವಿಮಾನ ನಿಲ್ದಾಣದಲ್ಲಿ ಅವರನ್ನು ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಆಧರಿಸಿ ಬಂಧಿಸಲಾಗಿದೆ. ಅವರೆಲ್ಲರೂ ತ್ರಿಪುರಾದಿಂದ ಚೆನ್ನೈಗೆ ಪ್ರಯಾಣ ಮಾಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳನ್ನು ದುಲಾಲ್ ಶೇಖ್, ಯೂಸುಫ್ ಶೇಖ್, ಅಮೀನುಲ್ ಶೇಖ್ ಮತ್ತು ರೆಜಾಬುಲ್ ಶೇಖ್ ಎಂದು ಗುರುತಿಸಲಾಗಿದೆ. ಬಂಧನದ ನಂತರ ಅವರನ್ನು ಏರ್ಪೋರ್ಟ್ನ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.