ಕರ್ನಾಟಕ

karnataka

By

Published : May 15, 2022, 7:51 PM IST

Updated : May 15, 2022, 8:05 PM IST

ETV Bharat / bharat

ನಟಿ ಕೇತ್ಕಿ ಬೆನ್ನಲ್ಲೇ ಬಿಜೆಪಿ ವಕ್ತಾರರಿಂದ ಶರದ್ ಪವಾರ್ ಬಗ್ಗೆ ಪೋಸ್ಟ್ : ಎನ್‌ಸಿಪಿ ಕಾರ್ಯಕರ್ತರಿಂದ ಹಲ್ಲೆ

ಪುಣೆಯಲ್ಲಿ ಬಿಜೆಪಿ ವಕ್ತಾರ ವಿನಾಯಕ್ ಅಂಬೇಕರ್ ಎರಡು ದಿನಗಳ ಹಿಂದೆ ಪವಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. ಶನಿವಾರ ಎನ್‌ಸಿಪಿ ಕಾರ್ಯಕರ್ತರು ಅಂಬೇಕರ್ ಅವರ ಕಚೇರಿಗೆ ತೆರಳಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

BJP spokesperson Vinayak Ambekar beaten by NCP workers
BJP spokesperson Vinayak Ambekar beaten by NCP workers

ಪುಣೆ(ಮಹಾರಾಷ್ಟ್ರ): ಬಿಜೆಪಿ ವಕ್ತಾರ ವಿನಾಯಕ್ ಅಂಬೇಕರ್ ಅವರ ಮೇಲೆ ಎನ್‌ಸಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ನಟಿ ಕೇತ್ಕಿ ಚಿತಾಳೆ ಶುಕ್ರವಾರ ಎನ್‌ಸಿಪಿ ನಾಯಕ ಶರದ್ ಪವಾರ್ ಕುರಿತು ಆಕ್ಷೇಪಾರ್ಹ ಪೋಸ್ಟ್ ಮಾಡಿದ ಬೆನ್ನಲ್ಲೇ ಇವರೂ ಸಹ ಪೋಸ್ಟ್​ ಹಾಕಿದ್ದರು. ಪರಿಣಾಮ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

ಪುಣೆಯಲ್ಲಿ ಬಿಜೆಪಿ ವಕ್ತಾರ ವಿನಾಯಕ್ ಅಂಬೇಕರ್ ಎರಡು ದಿನಗಳ ಹಿಂದೆ ಪವಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು ಎನ್ನಲಾಗ್ತಿದೆ. ಶನಿವಾರ ಎನ್‌ಸಿಪಿ ಕಾರ್ಯಕರ್ತರು ಅಂಬೇಕರ್ ಅವರ ಕಚೇರಿಗೆ ತೆರಳಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

ಎನ್‌ಸಿಪಿ ಕಾರ್ಯಕರ್ತರಿಂದ ಹಲ್ಲೆ

ನಟಿ ಕೇತ್ಕಿ ಚಿತಾಳೆ ಅವರು ಶುಕ್ರವಾರ ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಹಿನ್ನೆಲೆ ಈಗ ಅವರನ್ನು ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದೆ.

ಹೆಚ್ಚಿನ ಓದಿಗೆ:ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ : ತಾನೇ ವಾದ ಮಾಡಿದ ನಟಿಗೆ 3 ದಿನ ಪೊಲೀಸ್​ ಕಸ್ಟಡಿ

Last Updated : May 15, 2022, 8:05 PM IST

For All Latest Updates

TAGGED:

ABOUT THE AUTHOR

...view details