ರಾಜಕೋಟ್(ಗುಜರಾತ್):ಪಾಕಿಸ್ತಾನದಲ್ಲಿ ಹುಟ್ಟಿದ್ದ ಹಿಂದೂ ಸಮುದಾಯದ ವಧು-ವರ ಇದೀಗ ಭಾರತಕ್ಕೆ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ನಡೆದಿದ್ದು, ಕಳೆದ ಶನಿವಾರದಂದು ಹಿಂದೂ ಸಂಪ್ರದಾಯದಂತೆ ಇವರು ವೈವಾಹಿಕ ಜೀವನಕ್ಕೆ ದಾಪುಗಾಲಿಟ್ಟಿದ್ದಾರೆ.
ಪಾಕ್ನಲ್ಲಿ ಹುಟ್ಟಿದ ಹಿಂದೂ ಜೋಡಿ ಜಮ್ಮು - ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ರದ್ದುಗೊಂಡ ಬಳಿಕ, ಪಾಕ್ನಲ್ಲಿ ಹಿಂಸಾಚಾರದಂತಹ ಹೇಯ ಕೃತ್ಯ ನಡೆಯುತ್ತಿವೆ. ಹೀಗಾಗಿ ಕರಾಚಿಯಲ್ಲಿದ್ದ ಮಹೇಶ್ವರಿ ಸಮುದಾಯದ ಎರಡು ಮದುವೆ ಜೋಡಿ ಅಲ್ಲಿಂದ ಗುಜರಾತ್ನ ರಾಜಕೋಟ್ಗೆ ಪ್ರಯಾಣ ಬೆಳೆಸಿ ಸಪ್ತಪದಿ ತುಳಿದಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಹೇಶ್ವರಿ ಸಮುದಾಯದ ಅಧ್ಯಕ್ಷ ಭವಿಷ್ಯ ಮಹೇಶ್ವರಿ, ಇಲ್ಲಿಯವರೆಗೂ ತಾವು ಪಾಕ್ನ 90 ದಂಪತಿಗಳಿಗೆ ಮದುವೆ ಮಾಡಿಸಿರುವುದಾಗಿ ಹೇಳಿದ್ದಾರೆ. ಜತೆಗೆ ಅವರು ಭಾರತದಲ್ಲೇ ಉಳಿದುಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾಕ್ನ ದಂಪತಿಗಳು, ತಾವು ಭಾರತದಲ್ಲೇ ಇರಲು ನಿರ್ಧರಿಸಿದ್ದು, ಹಿಂದೂ ಸಮುದಾಯದಕ್ಕೆ ಪಾಕ್ನಲ್ಲಿ ಬಹಳಷ್ಟು ಕಿರುಕುಳ ನೀಡಲಾಗುತ್ತಿದೆ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ. ಸದ್ಯ ಕರಾಚಿಯಲ್ಲಿ 3 ಸಾವಿರಕ್ಕೂ ಹೆಚ್ಚು ಮಹೇಶ್ವರಿ ಸಮುದಾಯದ ಕುಟುಂಬಗಳು ವಾಸವಾಗಿವೆ. ಅವರೆಲ್ಲರೂ ಭಾರತದಲ್ಲಿ ಬಂದು ನೆಲೆಸಲು ಉಸ್ತುಕರಾಗಿದ್ದಾರೆ ಎಂದು ಮದುವೆ ಆಗಿರುವ ಜೋಡಿ ತಿಳಿಸಿದೆ.