ಕರ್ನಾಟಕ

karnataka

ETV Bharat / bharat

ಭೋಪಾಲ್​ ದುರಂತ ನೆನಪಿಸಿದ ವೈಜಾಗ್​ ದುರ್ಘಟನೆ, ಜನರ ಪರಿಸ್ಥಿತಿಯನ್ನೊಮ್ಮೆ ನೋಡಿ!

ಮಧ್ಯಪ್ರದೇಶದ ಭೋಪಾಲ್ ಅನಿಲ ದುರಂತ ನೆನಪು ಮಾಡುವಂತಹ ಘಟನೆ ಇದೀಗ ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ನಡೆದಿದೆ.

By

Published : May 7, 2020, 12:28 PM IST

Updated : May 7, 2020, 12:50 PM IST

Visakhapatnam kills nine
Visakhapatnam kills nine

ವಿಶಾಖಪಟ್ಟಣಂ:ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬೆಳ್ಳಂಬೆಳಗ್ಗೆ ನಡೆದಿರುವ ಅನಿಲ​ ಸೋರಿಕೆ ಪ್ರಕರಣವು 1984ರ ಭೋಪಾಲ್ ​ ದುರಂತ ನೆನಪು ಮಾಡುವಂತಿದೆ.

ದೇಶವೇ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಶಾಖಪಟ್ಟಣಂನ ಎಲ್​ಜಿ ಪಾಲಿಮರ್​ ರಾಸಾಯನಿಕ ಸ್ಥಾವರದಲ್ಲಿ ಅನಿಲ ಸೋರಿಕೆಯಿಂದಾಗಿ ನಡೆದಿರುವ ಮಹಾ ದುರ್ಘಟನೆಗೆ ದೇಶವೇ ಬೆಚ್ಚಿಬಿದ್ದಿದೆ.

ಭೋಪಾಲ್​ ಗ್ಯಾಸ್​ ದುರಂತ

ಘಟನೆಯಲ್ಲಿ ಈಗಾಗಲೇ 9 ಮಂದಿ ಸಾವನ್ನಪ್ಪಿದ್ದು, 200 ಮಂದಿಯ ಆರೋಗ್ಯ ಸ್ಥಿತಿಗತಿ ಗಂಭೀರವಾಗಿದೆ. ಉಳಿದಂತೆ 5 ಸಾವಿರಕ್ಕೂ ಹೆಚ್ಚು ಜನರು ವಿಷಗಾಳಿ ಸೇವಿಸಿ ಅಸ್ವಸ್ಥರಾಗಿದ್ದಾರೆ.

ಕಾರ್ಖಾನೆಯಲ್ಲಿ ಗ್ಯಾಸ್​ ಸೋರಿಕೆಯಾಗುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಖಾನೆಯ ಸುತ್ತಮತ್ತಲಿನ 5 ಕಿ.ಮೀ. ವ್ಯಾಪ್ತಿಯ 5 ಗ್ರಾಮಗಳನ್ನು ಸಂಪೂರ್ಣವಾಗಿ ಖಾಲಿ ಮಾಡಿಸಲಾಗಿದೆ.

Last Updated : May 7, 2020, 12:50 PM IST

ABOUT THE AUTHOR

...view details